ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಡಿಸೆಂಬರ್ 15, 2012

ಮಗನೆಂಬ ನಗ


ಅಮ್ಮ ಎಂದು ಕರೆಯುವರಿಲ್ಲ
ಅಪ್ಪನೆಂದು ಪ್ರೀತಿಸುವರಿಲ್ಲ 
ಮಮತೆಯ ಭಾವದ ಅರಿವಿಲ್ಲ
ಸಂಬಂಧ ಮೌಲ್ಯದ ಬೆಲೆಯಿಲ್ಲ
ಆದರೂ ಬೇಕು ಗಂಡು ಮಗ 
ಅಜ್ಞಾನಿಗಳಿಗೆ ಇವನ ಬೆಲೆಯೇ ನಗ 
ಅಕ್ಕರೆ ಮಾತು ಆಡುವುದಿಲ್ಲ 
ನಕ್ಕರೆ ನಗಲು ಬಿಡುವುದಿಲ್ಲ
ಸಂತೆಯಲಿ ಮಾನವನ್ನು ಮಾರುವರೆಲ್ಲ 
ಹಿರಿಯರನ್ನು ಹೊಡೆಯುವರಲ್ಲ
ಆದರೂ ಬೇಕು ಗಂಡು ಮಗ 
ಅಜ್ಞಾನಿಗಳಿಗೆ ಇವನ ಬೆಲೆಯೇ ನಗ 
ದೀಪ ಬೆಳಗಿಸಲೆಂದು ಹುಟ್ಟಿದವರಲ್ಲ 
ಕೀರ್ತಿ ಹಬ್ಬಲೆಂದು ದುಡಿದವರಲ್ಲ 
ಅಮ್ಮ-ಅಪ್ಪನಿಗೆ ಶತ್ರು ಅನ್ನುವರಲ್ಲ 
ತುತ್ತು ನೀಡಿದ ತಾಯಿಯ ಕತ್ತು ಕೊಯ್ಯುವರಲ್ಲ 
ಆದರೂ ಬೇಕು ಗಂಡು ಮಗ 
ಕೆಲವರಿಗೆ ಮಗನೇ ಬಂಗಾರದ ನಗ 
ಹಾಲುನಿಸಿದ ತಾಯಿಯ ಸ್ಮರಿಸುವರಿಲ್ಲ
ಕೈ ಹಿಡಿದು ನಡಿಸಿದ ಅಪ್ಪನ ಅರಿವಿಲ್ಲ
ಕೆಟ್ಟವರ ಜೊತೆ ಸೇರಿ ಕೆಡುವರೆಲ್ಲ
ವೃದ್ಧಾಶ್ರಮದ ದಾರಿ ಹೆತ್ತವರಿಗೆ ತೋರಿಸುವರಲ್ಲ 
ಆದರೂ ಬೇಕು ಗಂಡು ಮಗ 
ಗಂಡು ಮಗನೆಂದರೆ ಚಿನ್ನದ ಮಗ 
ಮಡದಿಯ ಮದ್ದಿಗೆ ನಶೆಯಾಗುವರಲ್ಲ
ಹೆತ್ತವರ ಕಳ್ಳಿಗೆ ಬೆಂಕಿ ಇಡುವರಲ್ಲ 
ಹಿರಿಯರ ಸೇವೆ ತಿಳಿದಿಲ್ಲ 
ಸ್ವಾರ್ಥದಲಿ ಹೆತ್ತವರನು ಸಂಹರಿಸುವರಲ್ಲ
ಆದರೂ ಬೇಕು ಗಂಡು ಮಗ 
ಮನೆ ಬೆಳಗಿಸಲು ಗಂಡು ಮಗ 
ಮರೆಯದಿರಿ ದೀಪ ಹಚ್ಚುವಳು ಹೆಣ್ಣು 
ಬೆಳಕು ನೀಡುವಳು ಹೆಣ್ಣು 
ಆ ಬೆಳಕಿನಲಿ ಮಿಂಚುವನು ಮಾತ್ರ ಗಂಡು 
ಈ ಕುರುಡ ಲೋಕಕೆ ಕಾಣುವುದು 
ದೀಪವೆಂಬ ಉರಿಯುವ ಹೆಣ್ಣಲ್ಲ 
ಮಿಂಚಾಗಿ ಮಾಯವಾಗುವ ಗಂಡುಮೃಗವೆಂಬ " ಮಗ "

ಬುಧವಾರ, ನವೆಂಬರ್ 7, 2012

ಬಾಡಿದ ಬಾಳು

ಸಾಕು ಸಾಕಾಗಿದೆ ಈ ಜೀವನ
ಬೇಡವೆಂದರೂ ಉದಯಿಸುವನು ಸೂರ್ಯ
ಕತ್ತಲು ಹರಡಿ ಕರಗುತಿಹ ಮನವ
ಏನೆಂದು ಹೇಳಲಿ
ಏಕೆಂದು ಹೇಳಲಿ
ಮನಸ್ಸಿನ ತುಂಬ ಒಲಿದ ಅಶಾಂತಿಯ

ಅರಳು ಗುಲಾಬಿಯು ಮರೆತಿಹುದು ಮೊಗವ
ಕಪ್ಪು ಮೋಡಗಳು ನೀಡಿಲ್ಲ ನೆರಳ
ಎಲ್ಲಿದ್ದೆ ನಾನು
ಹೇಗಾದೆ ನಾನು
ತನುವಿಗೂ ಮನಸ್ಸಿಗೂ ಅಪರಿಚಿತ ಸಂಬಂಧ

ನೆನೆದರೂ ಮನದಲ್ಲಿ ನೆನೆದ ರೆಪ್ಪೆಗಳ
ತಿಳಿಯದು ಹೃದಯಕೆ ಶಾಂತಿಯ ವದನ
ಕತ್ತಲೂ ಕವಿದರೂ ಮೂಡದಿರಲಿ ಸೂರ್ಯ
ಈ ಹೊತ್ತೆ ಸಾಕೆನಗೆ
ಮರು ಜೀವ ಬೇಡೆನಗೆ
ನಿರಾಸೆಯಾದ ಜೀವಕೆ ಬೇಡಾಗಿದೆ ಜೀವನ 

ಶುಕ್ರವಾರ, ಮೇ 25, 2012

ಭಾವ.

ಕಾಯುವ ಮನಕೆ 
ಕತ್ತಲೆಯ ಪಾಡು 
ಬಯಕೆಯ ಮನಕೆ 
ಬೆಳಗುವ ಹಾಡು 
ಕತ್ತಲೆಯ ಪಾಡಿಗೆ 
ಬೆಳಗುವ ಹಾಡಿಗೆ 
ಮನದ ಮನೆಯಲ್ಲಿರಬೇಕು 
ದೀಪದ ನಾಡು

ಬಯಕೆ

ಬೆಳೆ ಇಲ್ಲದೆ ಬರುಡಾಗಿದೆ
ಮಳೆ ಇಲ್ಲದೆ ಮರುಳಾಗಿದೆ 
ಬೆಳೆ ಮಳೆ ಬಂದರೆ ಅಲ್ಲವೇ 
ಕಳೆ ಬರುವುದು ಜನನಿಯ ಮೊಗಕೆ 
ನಗುವೆಲ್ಲಿ ! ಖುಷಿಯೆಲ್ಲಿ 
ಮೌನ ತುಂಬಿದೆ ಎದೆಯಡಿಯಲಿ 
ಬಯಸಿ ಬೆಂದಿದೆ 
ಕನಸು ಕಂಡು ನೊಂದಿದೆ 
ನನಸಾಗುವ ಛಲವೆಲ್ಲಿ 
ಬಂಜೆಯ ನೋವಿದೆ ಹೃದಯಾಳದಲಿ 
ಕೊರಗುತಿಹ ಮನದಲ್ಲಿ 
ಒಂದ ಹನಿ ತಗಲಿ ಬೀಜ ಮೊಳಕೆಯಾಗಿದೆ 
ಬೆಳೆಯುವ ಆನಂದಕೆ 
ಪನ್ನೀರು ಸುರಿದ ಬಂದು 
ಮೊಗ ತುಂಬ ಉಲ್ಲಾಸ , ನಗು ನೀಡಿದೆ

ಅಳುವ ಮನಸ್ಸು

ಕಂದಮ್ಮನ ಬೆಳೆಸುತ್ತಿರುವ 
ಅಮ್ಮನ ಗರ್ಭಕೋಶದಲಿ 
ನಲಿದಾಡುತಿದೆ ಕೂಸು ಜಗವ ಕಾಣುವ 
ಬಯಕೆಯಲಿ 
ಕನಸಿನ ಗೋಪುರ ರಚಿಸಿದೆ 
ಅಮ್ಮನ ಹೃದಯದಲಿ 
ಹಾಗೆನ್ನುವೆ ಹೀಗೆನ್ನುವೆ 
ಸಂತಸದ ಗಳಿಗೆಯ ಕಾಯುವೆ 
ಕಂದಮ್ಮನ ಆಡಿಸುವ 
ಲಾಲಿ ಹಾಡು ಕೇಳಿಸುವ 
ಆಸೆಗಳ ದೀಪ ಬೆಳಗುತಿದೆ 
ಬಯಸದೆ ಇದ್ದರೂ ಬಯಸಿ ಬಂದಿದ್ದರೂ 
ದೇವರ ದಯೆ ಇಲ್ಲದೇ ಅಮ್ಮನ ಮಾಯೆ ಕಾಣದೆ 
ಕಲ್ಲ ಮನದ ಮಾನವರು 
ಕಿತ್ತೆಸೆದಿರುವರು ಹೆಣ್ಣು ಕಂದಮ್ಮನನು 
ಪಾಪ ಆ ಕೂಸಿನದಲ್ಲ 
ಪಾಪಿಗಳು ಹೆಣ್ಣು ತೊರೆದವರು 
ಜಗವ ಬೆಳಗಲು ಬರುವ ಜೀವಕೆ 
ಕೊಳ್ಳೆ ಇಟ್ಟು ಕತ್ತಲು ನೀಡಿದವರು 
ಅಮ್ಮನ ಕರುಳಿಗೆ ಸುತ್ತಿದ ಜೀವವ 
ಕೈಯ್ಯಾರೆ ಕೊಂದು ಹೆಣ ಮಾಡಿದವರು 
ಎದೆಹಾಲು ಉಣಿಸುವ ಆ ತಾಯಿಗೆ 
ಕಂಣ್ಣೀರಿನ ಹೊಳೆಯಲ್ಲಿ ಮುಳುಗಿಸಿದವರು 
ತುತ್ತು ಮುತ್ತು ನೀಡುವ ಮಮತೆಗೆ 
ಮಣ್ಣಿನಲ್ಲಿ ಹಾಕದೆ ಜೀವಂತ ಶವ ಮಾಡಿದರು 

ಜನುಮದಾತರು

ಅಳುತ ಬರುವೆ ನಾನು 
ನಕ್ಕು ನಲಿದಿರಿ ನೀವು 
ಬೆತ್ತಲೆ ಇದ್ದ ನನಗೆ 
ಬಣ್ಣದ ಬಟ್ಟೆ ನೀಡಿದರಿ ನೀವು 
ನಕ್ಕರೆ ನಾನು 
ನಗುವಿರಿ ನೀವು 
ಅತ್ತರೆ ನಾನು ಅಳುವಿರಿ ನೀವು 
ಮುಟ್ಟಿದರೆ ನಾನು 
ಮುದ್ದಾಡುವಿರಿ ನೀವು 
ಹಾಸಿಗೆ ಒದ್ದೆಯಾದರೆ 
ಬೈಯ್ಯದೆ ಬದಲಿಸುವಿರಿ ನೀವು 
ನಿದ್ದೆಯಲೂ ಕಾಡಿದರೂ 
ಲಾಲಿ ಹಾಡುವಿರಿ ನೀವು 
ಹಸಿವ ಎನ್ನುವ ಮೊದಲೆ 
ಹೊಟ್ಟೆ ತುಂಬಿಸುವಿರಿ ನೀವು 
ಅಜ್ಞಾನಿಯಾದ ನನ್ನಲಿ 
ಜ್ಞಾನದ ದೀಪ ಬೆಳಗಿಸಿದಿರ ನೀವು 
ಬದುಕಿನ ಜಟಕಾಬಂಡಿಯಲಿ 
ನಿಮ್ಮ ಬದುಕನ್ನೆ ಬದಿಗಿಟ್ಟಿರಿ ನೀವು 
ನನ್ನ ಬಾಳ ನಂದಾದೀಪವಾಗಲು 
ತ್ಯಾಗಿಸಿರುವಿರಿ ಬಾಳನು ನೀವು 
ನಾನು ನಿಮ್ಮವನು 
ಪ್ರೀತಿಯ ಪಾತ್ರರಿರುವೆನು 
ನೀವು ನಮ್ಮವರು 
ಬದುಕ ನೀಡಿದ ಜನುಮದಾತರು

ಕನ್ನಡದ ದೀಪ ಬೆಳಗಲಿ



JPÀÌqÀ J£ÀßqÀªÁVzÉ
£À«Ää PÀ£ÀßqÀ
PÀ£ÀßqÀzÀ PÀ£ÀßrAiÀiÁUÀ°
PÀgÀÄ£ÁqÀ PÀ£ÀßqÀ

G¹gÀ G¹gÀ°
ºÀ¹gÁUÀ° PÀ£ÀßqÀ
JzÉ §rvÀªÀÅ
ºÉüÀ° PÀ£ÀßqÀ

D°¸ÀĪÀ ªÀÄ£ÀPÉ
PÉüÀ° EA¥ÁzÀ PÀ£ÀßqÀ
PÀtÂÚ£À eÉÆvÉAiÀiÁV
PÀuÁÚUÀ° PÀ£ÀßqÀ

gÀPÀÛªÁV ºÀjAiÀÄ°
zÉúÀzÀ° PÀ£ÀßqÀ
ºÀÈzÀAiÀÄ vÀÄA©gÀ°
¦æÃw¬ÄAzÀ PÀ£ÀßqÀ

ºÀÄnÖzÀ PÀƸÀÄ
£ÀÄrAiÀÄ° PÀ£ÀßqÀ
PÀÄtÂAiÀÄĪÀ £À«¯ÁV
PÀÄtÂzÁr¸ÀĪÀ PÀ£ÀßqÀ

PÀ°¬Äj PÀ°¹j
eÁÕ£À¢Ã¥À PÀ£ÀßqÀ
ªÀÄ£ÀzÀ° ªÀÄ£ÉAiÀÄ°
¨É¼ÀUÀ° PÀ£ÀßqÀ

£ÀÄr PÀ£ÀßqÀ £ÀqÉ PÀ£ÀßqÀ
vÀ£ÀÄ PÀ£ÀßqÀ ªÀÄ£À PÀ£ÀßqÀ
PÀ°AiÀÄĪÁ PÀ£ÀßqÀ £À°AiÀÄĪÁ PÀ£ÀßqÀ
ªÀÄgɸÀĪÁ £ÁªÉ®ègÀÆ JPÀÌqÀ J£ÀßqÀ
§AiÀĹj ¨É¼É¹j
PÀgÀÄ£ÁqÀ PÀ£ÀßqÀ
ºÀ¹ªÁUÀ° ºÀ¹gÁUÀ°
PÀgÀÄ£ÁqÀ PÀ£ÀßqÀ
zÉúÀªÁUÀ° fêÀªÁUÀ°
PÀgÀÄ£ÁqÀ PÀ£ÀßqÀ
§gÉAiÀÄĪÀ ±À§Ý PÉüÀĪÀ £ÁzÀ
ºÁPÀĪÀ vÁ¼À ¸À«AiÀÄĪÀ ¸ÁézÀ
MAzÉà PÀ£À¸ÀÄ PÀ£ÀßqÀªÁUÀ° £À£Àß PÀ£ÀßqÀ
£À£À¸ÁUÀ° ¸ÀzÁ ¨É¼ÀUÀĪÀ £ÀAzÁ¢Ã¥ÀzÀ PÀ£ÀßqÀ

ಬುಧವಾರ, ಮೇ 9, 2012

ಉಳಿಸಿರಿ ಹೆಣ್ಣು ಕಂದಮ್ಮನ ಜೀವ




ಹೆಣ್ಣು ಹೆಣ್ಣೆಂದರೆ
ಕೊರಗುವಿರೇಕೆ ನೀವಿಂದು
ಈ ಹೆಣ್ಣೆ ಅಲ್ಲವೇ?
ನಿಮಗೆ ಜನ್ಮ ನೀಡಿದವಳು
ಮರೆಯದಿರಿ ನೀವು
ಭೂಮಿ ತಾಯಿಯ ಹೆಣ್ಣೆಂದು
ಮಮತೆಯ ಮಡಿಲಲಿ
ಸಾಕುತಿರುವಳು ಜಗದ ಜೀವಿಗಳನು
ಕ್ರೋಧಿಯಾದರೆ ಅವಳು
ಕೊಲೆಗಾರನನ್ನೆ ಕೊಲ್ಲಬಲ್ಲಳು
ಪೂಜಿಸುವ ತಾಯಿ
ಭಾರತಾಂಬೆಯು ಕೂಡ ಹೆಣ್ಣು
ಮರೆಯದಿರಿ ಕಟುಕರೆ
ಹೆಣ್ಣು ಹೊಣ್ಣೆಂದು

ಹೆಣ್ಣು ಹೆಣ್ಣೆಂದರೆ
ಕೊರಗುವಿರೇಕೆ ನೀವಿಂದು ?
ಕ್ಷಮಯಾ ಧರಿತ್ರಿ
ಹೆಣ್ಣೆಂಬ ಹೆಣ್ಣು
ದು:ಖದಿ ಕ್ಷಣದಿ
ಮರೆಸುವಳು ನೋವನ್ನು
ನಗಿಸುವಳು ನಿಮ್ಮನ್ನು
ಈ ಕಲಾಕಾರ ಹೆಣ್ಣು
ತನ್ನ ಹಸಿವು ಕಾಣದೆ
ಹಸಿದ ಜೀವಕೆ ಅನ್ನ ನೀಡುವಳು ಹೆಣ್ಣು
ಪರರ ಸುಖಕೆ ತನ್ನ ಸುಖವ
ತ್ಯಾಗಿಸುವಳು ಹೆಣ್ಣು
ಕಣ್ಣೀರಿನ ಕಥೆಯ
ಸೆರಗಿನಲಿ ಕಟ್ಟಿ ಹಾಕುವಳು ಹೆಣ್ಣು

ದಾನಗಳಲ್ಲಿ ಶ್ರೇಷ್ಠವು ಒಂದು
ನೀಡಿರಿ ಜೀವದಾನ ಹೆಣ್ಣಿಗಿಂದು
ಹೆಣ್ಣೆಂದರೆ ಜೀವಿ ಹೆಣ್ಣು
ಉಳಿಸಿರಿ ಆಕೆಯ ಪ್ರಾಣವನ್ನು
ನೀಡಿರಿ ಜೀವದಾನ ಹೆಣ್ಣಿಗಿಂದು
ಕೊಲ್ಲದಿರಿ ಹೊಣ್ಣೆಂಬ ಹೆಣ್ಣನ್ನು
ಮಾಡದಿರಿ ಭ್ರೂಣ ಹತ್ಯೆಯನ್ನು
ಕತ್ತರಿಸದಿರಿ ಮಮತೆಯ ಬಳ್ಳಿಯನ್ನು
ಕೊಲ್ಲದಿರಿ ಹೊಣ್ಣೆಂಬ ಹೆಣ್ಣನ್ನು
ಆರಿಸದಿರಿ ಬೆಳಗುವ ದೀಪವನ್ನು
ಹಸಿಗೂಸಿನ  ಕೂಗು ಕೇಳುತ್ತಿಲ್ಲವೇ ನಿಮಗೆ
ಕೊಲ್ಲುತ್ತಿರುವಿರಿ ಹೆಣ್ಣನ್ನು
ಕತ್ತರಿಸಿರುವಿರಿ ಬಳ್ಳಿಯನ್ನು
ಮಾಡುತ್ತಿರುವಿರಿ ಭ್ರೂಣ ಹತ್ಯೆಯನ್ನು
ಬೆಳಗುವ ಮೊದಲೆ ಆರಿಸುತ್ತಿರುವಿರಿ
ಮನೆ ಮನೆಗಳ ಮನ ಮನಗಳ
ಹೆಣ್ಣೆಂಬ ನಂದಾದೀಪವನ್ನು
ಕತ್ತಲು ಹರಡುತಿದೆ ! ಮಾನವ ..
ಇನ್ನಾದರೂ ಬೆಳಗು ನೀ ಹೆಣ್ಣೆಂಬ ಬೆಳಕನ್ನು
ಮರೆತುಬಿಡು ಗಂಡು ಹೆಣ್ಣೆಂಬ
ಜಾತಿಭೇದವನ್ನು
ಶುರುವಾಗಲಿ ಹೃದಯದಿಂದ ಮನೆವರೆಗೆ
ಮನೆಯಿಂದ ಊರೊಳಗೆ
ಊರಿನಿಂದ ನಗರದೊಳಗೆ
ನಗರದಿಂದ ರಾಜ್ಯದೊಳಗೆ
ರಾಜ್ಯದಿಂದ ದೇಶದೊಳಗೆ
ದೇಶದಿಂದ ಇಡೀ ಪ್ರಪಂಚದೊಳಗೆ
ಶುರುವಾಗಲಿ ಸ್ತ್ರೀ ಲಿಂಗ ಭ್ರೂಣಹತ್ಯೆ ಅಳಿಸುವ ಹೋರಾಟ

ನೀಡಿರಿ ಮಹತ್ವ ಹೆಣ್ಣಿಗೆ
ಜನ್ಮ ನೀಡಿರಿ ಹೆಣ್ಣೆಂಬ ಮುಗ್ಧ ಜೀವಕೆ ..

ಶನಿವಾರ, ಮೇ 5, 2012

ಬರದ ಜ್ವರ ಬಿಡಿಸು ಬಾ ಮಳೆರಾಯ



ಬೇಸಿಗೆಯ ದಿನಗಳಿವು 
ಬರಗಾಲದ ಕ್ಷಣಗಳಿವು
ಮಳೆ ಬೆಳೆ ಇಲ್ಲದೆ ಬತ್ತಿದೆ ನೆಲವು 
ಸೂರ್ಯನ ತಾಪಕೆ ಕರಗಿವೆ ಹೊಳೆ ಕೆರೆಯು
ಕುಡಿಯಲು ನೀರಿಲ್ಲ, ಬೆಳೆಯಲು ಮಳೆಯಿಲ್ಲ 
ಬೆಳೆ ಇಲ್ಲದೆ ಧನ ಧಾನ್ಯಗಳಿಲ್ಲ
ಹಸಿದ ಹೊಟ್ಟೆಯಲಿ ಹಳಸಿದೆ ಅನ್ನವೆಲ್ಲ 
ಕೊಳೆ ಬಟ್ಟೆ ತೊಳೆಯಲು ಜಲವೇ ಇಲ್ಲ
ಶಾಂತ ಸಹನೆ ಜನರಿಗಿಲ್ಲ , ಸ್ವಾರ್ಥ ತುಂಬಿದೆಯಲ್ಲ 
ಶ್ರಮಿಸುತಿದೆ ಕಾರ್ಯ ನಿರ್ವಹಿಸುತಿದೆ ಸರಕಾರ 
ನೀರು ತಯಾರಿಸಲು ರಾಜಕಾರಣಿಗಳಲ್ಲ ಜಾದೂಗಾರ 
ಎಲ್ಲರ ಮಿತ ಬಳಕೆಯೆ ಸಮಸ್ಯೆಗಿರುವ ಪರಿಹಾರ 
ಹೊಳೆ ರಚಿಸಬೇಕು ನಿಸರ್ಗವೆಂಬ ಕಲೆಗಾರ
ಬಾಯಾರಿಸಿದ ಗದ್ದೆಗಳು 
ಒಣಗಿವೆ ಎಮ್ಮೆ- ಎತ್ತುಗಳು
ಕಂಗಾಲಾದ ಬಡವರ ಹೃದಯಗಳು 
ಗ್ರಾಮೀಣ ಜನತೆಯ ಹಾಹಾಕಾರ 
ಪ್ರತಿಭಟನೆಗೆ ವಿರೋಧ ಪಕ್ಷ ಸಲಹೆಗಾರ
ಸರಕಾರ  ತೊಟ್ಟಿರುವುದು ಸಮಸ್ಯೆಯ ಹಾರ 
ಭೂತಾಯಿಯ ಕರುಣೆಯಡಿ ಬರಲಿ ಸಂತೈಸಲು ಮಳೆಗಾರ 

ಶುಕ್ರವಾರ, ಏಪ್ರಿಲ್ 20, 2012

ಬರುವೆಯಾ ನೀನಿಂದು ??

ಬಿಸಿಲು ಬೇನೆಯಲಿ
ನಿನ್ನ ನೆನಪಿಸುತ
ಅರಳಿದ ಗುಲಾಬಿ ನಾನಿರುವೆ
ಕಂಡರು ನೀ ದೂರದಲಿ
ನನ್ನ ನೆನೆಸುತ
ಮೋಡದಾಚೆ ಮರೆಯಾಗಿರುವೆ
ದಿನ ಕಳೆದು ಹೋದರೂ
ಕಾಣದ ನೀನು
ಮುನಿಸು ಬಂದರು ಮರೆತಿರುವೆ
ಬರುವ ದಾರಿಯಲಿ
ಭಾವನೆಯ ಸರ ಹಿಡಿದು
ಸನ್ಮಾನಕೆ ನಾ ನಿಂತಿರುವೆ
ಬಂದರೆ ನೀನು
ಸಂತಸದ ಹೊನಲು
ಈ ಭೂಮಿ ತಾಯಿಗೆ...

ಗುರುವಾರ, ಏಪ್ರಿಲ್ 19, 2012

* ಬೆಳಗುವ ದೀಪ *








ಬೆಳಗುವಾ ಬೆಳಗುವಾ 
ಬೆಳಗುವ ದೀಪ


ಕಿತ್ತೆಸೆವ ಕೊಳೆಯ
ಕೆತ್ತಿಸುವ ಕಲೆಯ
ಸಂಸ್ಕ್ರತಿಯ ದೀಪ ಬೆಳಗುವಾ
ಬೆಳೆಸುವ ಪ್ರೀತಿಯ
ಸೆಳೆಯುವ ಸತ್ಯವ
ಸಂಬಂಧದ ದೀಪ ಬೆಳಗುವಾ
ಕರುನಾಡು ಕಳೆಯ
ಕವಿಬನದ ಮನವ
ಸಾಹಿತ್ಯ ದೀಪ ಬೆಳಗುವಾ
ಜಯಿಸುವ ಶಾಂತಿಯ 
ಅಳಿಸುವ ಅಹಿಂಸೆಯ
ದಿವ್ಯ ಭಾವನೆಯ ದೀಪ ಬೆಳಗುವಾ
ಜಾತಿಗಳು ಒಂದಾಗುವ
ತನು-ಮನ ಚಿಗುರೊಡೆಯುವ
ಜಗವೆಲ್ಲ ಸಂತಸದ ದೀಪ ಬೆಳಗುವಾ



ಬೆಳಗುವಾ ಬೆಳಗುವಾ 
ಬೆಳಗುವ ದೀಪ

ಬುಧವಾರ, ಜನವರಿ 25, 2012

ಭಾರತಾಂಬೆ



ಬರೆಯಬೇಕೆಂದೆ ನಾನೊಂದು ಕವನ ಮುಂಜಾನೆಯಲಿ
ಭಾವದ ಕುಸುಮ ಅರಳಿದ ದಿನವಾಗಲಿ
ಭಾರತಾಂಬೆಯ ಮಡಿಲಿಗೆ ಮತ್ತೆ ಮಹಾತ್ಮರು ಹುಟ್ಟಿ ಬರಲಿ
ನಾನು ನನ್ನ ಸ್ವಾರ್ಥ ತೊಲಗಿ ನಾವು ಎಂಬುದಾಗಲಿ
ಜಾತಿ ಭೇದ ಬೇಡ ನಮಗೆ ನಾವೆಲ್ಲರೂ ಒಂದಾಗಲಿ
ಸಂಸ್ಕ್ರತಿ ಸಂಗಾತಿಯ ಜೊತೆಯೆಂದೂ ಮರೆಯದಿರಲಿ
ದೇಶಕ್ಕಾಗಿ ಮಡಿದ ಸೇವಕರಿಗೆ ಮನದಲ್ಲಿ ಗೌರವವಿರಲಿ
ಮಹಾತ್ಮರಿದ್ದರೆಂದು ಸ್ವಾತಂತ್ರ್ಯ ನಮ್ಮದಾಗಿದೆ ನೆನಪಿರಲಿ
ದೇಶ ಭಕ್ತಿ ಎಂದೆಂದಿಗೂ ಕುಂದದಿರಲಿ
ರಾಮರಾಜ್ಯದ ಕನಸು ನನಸಾಗಿಸುವ ಗುರಿಯಾಗಿರಲಿ
ನಮ್ಮ ಜನನಿ ಭಾರತಾಂಬೆಯು ಶಿಖರದ ಎತ್ತರಕೆ ಹಾರಲಿ
ಅವಳ ಕೀರ್ತಿ ಶಿಖರದ ಕಿರೀಟವಾಗಲಿ

ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಷಯಗಳು

ಮಂಗಳವಾರ, ಜನವರಿ 24, 2012

ಮರೆಯಲಾರೆ





ಮರೆಯಲಾರೆನು ಮರೆಯದನ್ನ
ಮರೆ ಮರೆ ಎಂದರೆ ಮರಣ ಹೊಂದೆನು
ಮನದಿ ಮೂಡಿದೆ ಮೌನವೇದನೆ
ಮರೆಯನೆಂದರೆ ಮರೆವೆನು
ಮನಸ್ಸಿನಾಳದಿ ಪ್ರೀತಿ ಪ್ರೇಮ
ಮನೆ ಕಟ್ಟಿದೆ ನಾ ಹೇಗೆ ಮುರಿಯೆನು
ಮಂಗಲದಿ ಮಾಂಗಲ್ಯವಾಗಿದೆ
ಮಾಂಗಲ್ಯವ ಹೇಗೆ ಮರೆಯೆನು
ಮರವಾಗಿ ಬೆಳೆದ ಬಂಧನಕೆ
ಮರಣದಂಡನೆ ನೀಡಲಾರೆನು
ಮರೆಯಲಾರದ ಮೌಲ್ಯವನ್ನು
ಮರೆಯೆಂದರೆ ನಾ ಮರೆಯಲಾರೆನು 

ಭಾನುವಾರ, ಜನವರಿ 22, 2012

ಹೈಸ್ಕೂಲ ಹುಡುಗನ ಲಾಲಿ ಹಾಡು




ಜೋ ಜೋ ಜೋ ಜೋ ಜೋ ಜೋ
ರಾತ್ರಿ ಹೊತ್ತ ಆಗೇತಿ
ಕಣ್ಣು ಮುಚ್ಚು ನನ್ನ ಮಗನ
ಕನಸಾಗ ಐಶ್ವರ್ಯ ಬರತಾಳ
ಕಣ್ಣು ಹೊಡೆದು ನಿನ್ನ ಮಲಗಸ್ತಾಳ
ಜೋ ಜೋ ಜೋ ಜೋ ಜೋ ಜೋ

ಸಚಿನ ತೆಂಡುಲ್ಕರ್
ಕ್ರಿಕೆಟ್ ಕಲಸ್ತಾನ
ಕ್ಯಾಪ್ಟನ್ ಧೋನಿ ಹೇರಸ್ಟೈಲ್
ಮಾಡೋದು ಹೇಳ್ತಾನ
ಪಿ.ಟಿ.ಉಷಾ ಓಡಿ ಪೆಟ್ರೋಲ
ಉಳಿಸೋದು ಹೇಳ್ತಾಳ
ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಶ್ರೀ ರಾಜಕುಮಾರರು
ಗಂಧದ ಗುಡಿ ತೋರಿಸ್ತಾರ
ಸಾಹಸಸಿಂಹ ಕರುನಾಡ
ಹೆಮ್ಮೆಯ ಹೊಗಳ್ತಾರ
ರೈತನ ಮಗಳೆಂದು ಪೂಜಾ ಗಾಂಧಿ
ಪೋಜು ನೀಡ್ತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಕುವೆಂಪು ಬೇಂದ್ರೆ
ಕವಿತೆಯ ಬರಿತಾರ
ಸಿ ಅಶ್ವಥ್ ಸೋನು
ರಾಗದಿ ಹಾಡವ ಹಾಡ್ತಾರ
ಉಮಾಶ್ರೀ ಹು ಹು ಅಂತಾ
ಬಿದ್ದ ಬಿದ್ದ ನಗಿಸ್ತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಸಲಮಾನ ಖಾನ ಬಂದು
ಎಕ್ಟಿಂಗ್ ಕಲಿಸ್ತಾನ
ಹೃತ್ವಿಕ್ ರೋಶನ ನಿನಗ
ಕುಣಿಯೋದ ತೋರಿಸ್ತಾನ
ಶೀಲಾ ಕಿ ಜವಾನಿ
ಕೈತ್ರಿನಾ ಮಾಡತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಸಿದ್ಧರಾಮಯ್ಯನು ಕೈ
ತೋರಿಸಿ ಕರಿತಾನ
ಕುಮಾರಸ್ವಾಮಿ ರಾಧಿಕಾ
ಜೊತೆ ಬರತಾನ
ಶೋಭಾ ಕರಂದ್ಲಾಜೆ ಯಡ್ಡಿ
ಗೆಳೆತನ ಹೊಗಳ್ತಾರ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಶ್ರೀ ಹೀರೆಮಗಳೂರು ಕಣ್ಣನ್
ಉದಯಾಲಿ ಹರಟೆ ಹೊಡಿತಾರ
ಗಂಗಾವತಿ ಪ್ರಾಣೇಶ
ಖಿಲ ಖಿಲನೆ ನಗಿಸ್ತಾನ
ಇಂದುಮತಿ ಹಾಡಿದರ
ಕೃಷ್ಣನ ನಂದಿನಿ ಕುಣಿತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ನಿವ್ಜ ರಿಪೋರ್ಟರ್ಸ
ಪ್ರಶ್ನೆಗಳ ಮಳೆ ಸುರಿಸ್ತಾರ
ಸ್ಟಾರ ಪ್ಲಸ್ ನವರು
ಹೆಂಗಸರಿಗೆ ಸೀರಿಯಲ್ ತೋರಿಸ್ತಾರ
ಎಫ್ ಟಿವಿ ನೋಡುವರು
ಜೊಲ್ಲವ ಸುರಿಸ್ತಾರ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ



ತಡ ಮಾಡಿ ಎದ್ದರ
ಶಾಲೆಗ(ಅ)ಪ್ಪ ಬಿಡಾಕ ಬರ್ತಾನ
ಮಿಸ್ಸ ಮಿಸ್ಸ ಅನ್ನುತ್ತ
ಕನಸಲಿ ಪಾಠ ಕೇಳ್ತಾನ
ಬೇಗ ಏಳು ಇಲ್ಲಂದ್ರ
ಹೊಡಿತೀನಿ ನನ್ನ ಮಗನ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ












ಶುಕ್ರವಾರ, ಜನವರಿ 20, 2012

ಆಸೆ



ಮತ್ತೊಮ್ಮೆ ನನ್ನ ನೆನಪುಗಳು
ನಿಜ ವಸ್ತುಗಳಾಗುವ ಆಸೆ 
ಚಿಕ್ಕವರಿದ್ದಾಗ ಆಡಿದ 
ಉಸುಕಿನಲಿ ಗೂಡು ಕಟ್ಟುವ ಆಸೆ 
ಬಣ್ಣ ಬಣ್ಣದ ಚಿಟ್ಟೆಯಾಗಿ 
ಫ್ರಾಕ್ಕು ತೊಟ್ಟು ಓಡುವ  ಆಸೆ 
ನನ್ನ ಗೆಳತಿ ಸವಿಯ 
ಗಲ್ಲವ ಚಿವುಟಿ ನಗುವ  ಆಸೆ 
ಊಟಕ್ಕೆಂದು ಕೈ ತೊಳೆದರೆ 
ಅಮ್ಮನ ಸೆರಗಿಗೆ ಒರೆಸುವ ಆಸೆ 
ಸಂಬಂಧಿಕರ ಮನೆಗೆ ಹೋದರೂ
ಅಪ್ಪನ ತೊಡೆ ಮೇಲೆ ಕೂಡುವ  ಆಸೆ 
ಕದ್ದು ಮುಚ್ಚಿ ನಾ ಮೊದಲೂ ಬಡಿದರೂ 
ಅಣ್ಣ ಬಡಿದನೆಂದು ಸುಮ್ಮನೆ ಅಳುವ ಆಸೆ 
ಕುಡಿಯದ ಹಾಲಿಗೆ ಬೈಯ್ಯುವರೆಂದು 
ಸುಮ್ಮನೆ ಕಣ್ಣ್ಮುಚ್ಚಿ ಮಲಗುವ ಆಸೆ 
ಗಿಡ್ಡಿ ಗಿಡ್ಡಿ ಅನ್ನುವರೆಂದು 
ಹಗ್ಗವ ಆಡಿ ಸೈಕಲ್ ತುಳಿದು ಉದ್ದಾಗುವ ಆಸೆ 
ಕನ್ನಡಿ ಮುಂದೆ ಸುಮ್ಮನೆ ನಕ್ಕು 
ಚೆಂದ ಇದ್ದೀಯಾ ಎಂದು ಹೊಗಳುವ ಆಸೆ 
ಎಲ್ಲರೂ ಹೇಳಿದ ಔಷದ ಬಳಸಿ 
ಪದೇ ಪದೇ ಕೂದಲನು ಜಗ್ಗಿ ನೋಡುವಾಸೆ 
ಕನಸಲಿ ಕಂದ ಅರಮನೆಯ 
ರಾಜಕುಮಾರಿ ನಾನೆಂದು ನೆನೆಸಿ ನಗುವ ಆಸೆ 
ಮುದುಡಿ ಮಲಗುವ ನನ್ನ ಚಟಕೆ 
ಅಮ್ಮನಿಂದ ಬಯಿಸಿಕೊಳ್ಳುವಾಸೆ
ಗೊರಕೆ ಹೊಡೆಯುವ ಅಪ್ಪನ ಹೊಟ್ಟೆಗೆ 
ಗಣಪತಿ ಗಣಪತಿ ಅನ್ನುವ ಆಸೆ 
ಬೈಯ್ಯುವ ಅಮ್ಮನಿಗೆ ಅಪ್ಪನಿಂದ ಹೆದರಿಸಿ 
ಜಾಣಳೆಂದು ಹೊಗಳಿಕೊಳ್ಳುವ ಆಸೆ 
ಗೆಳತಿಯರೊಡನೆ ಗುಳ್ಳವನ ತಂದು 
ಚಿಕಮಿರಿ ಚೆನ್ನಕ್ಕನ ಹಾಡಾಡುವ ಆಸೆ 
ಒಂದೋ ಎರಡೋ ನನ್ನ ಆಸೆ 
ಆಸೆಗಳನ್ನು ಬದಿಯಿಟ್ಟು ನೋಡಬೇಕಿದೆ 
ಜೀವನದಲಿ  ಕಳೆದು ಹೋದ ಕ್ಷಣಗಳ 
ಆಸೆ ಮನಕೆ ಹುಟ್ಟುತ್ತಿದೆ..
ಬನ್ನಿ ಆಶಿಸೋಣ ಎಲ್ಲರ ಆಸೆಗಳು 
ನಿರಾಶೆಯಾಗದಿರಲಿ 
ಅವರವರ ಆಶೆಗಳು ಅವರಿಗೆ ದೊರೆಯಲಿ ... 

ನಮ್ಮ ರೈತ



ಬಿಸಿಲೆನ್ನದೆ ಮಳೆಯೆನ್ನದೆ 
ಹಸಿವ ತಡೆದು ಬದುಕುವರು 
ಆಯಾಸವೆಂದು  ಬೆವರು ಸುರಿಸಿ
ಬೇಸಗಿಯಲಿ ಕಣ್ಣೀರು ಹರಿಸಿ 
ಊಳುವ ನೆಲ ಕಂಡಾಗ ಹಸಿರು 
ರೈತನ ದೇಹದಲಿ ಕೇಳಿತ್ತು ಉಸಿರು 
ಹರಕು ಬಟ್ಟೆ ಮುರುಕು ಮನೆ 
ಊಟದಲ್ಲಿ ಮೊಸರು ಕೆನೆ 
ಸಾಲ ಒಂದೆ ಇವರ ಚಿಂತೆ 
ಆದ್ರೂ ಮಲಗು ಪರಿ ನೋಡಲಾಗದು ಅಂತೆ 
ದಣಿದು ದುಡಿದು ಗಳಿಸುವರು ಹಣ 
ಸುಖಿಯೆಂದರೆ ರೈತ ಜನರ ಮನ 
ಹೃದಯಾ ತುಂಬ ಪ್ರೀತಿಯ ಶ್ರೀಮಂತ 
ನಲಿಯುವರು ಬಂದರೆ ಋತು ವಸಂತ 
ಹಾಸಿಗೆಯಷ್ಟು ಕಾಲು ಚಾಚು 
ಇಲ್ಲಾದರೆ ಬೋಳು ತಲೆ ಬಾಚು 
ಜಾಣರಿವರು ಪ್ರಾಣಿ ಸ್ನೇಹಿಗಳು 
ಭಾರತದ ಹೆಮ್ಮೆಯ ಒಕ್ಕಲಿಗರು 


ಬಹುಶ:


ನೀರ್ಜಿವಿ ಆಗಬೇಕಿತ್ತು
ನಾನು ನೀರ್ಜಿವಿ

ಸಹನೆ ಶಾಂತಿ ತಿಳಿಯಬೇಕಿಲ್ಲ
ದ್ವೇಷದ ಕಿಚ್ಚಿಗೆ ಹೆದರಬೇಕಿಲ್ಲ
ಪ್ರೀತಿಯ ಜಾಲಕೆ ಸಿಲುಕಬೇಕಿಲ್ಲ
ಭಾವನೆಗಳ ಸಾಗರದಿ ಮುಳುಗಬೇಕಿಲ್ಲ..
ದು:ಖವೆಂದು ನೋದಬೇಕಿಲ್ಲ
ಸಂಬಂಧ ಸಂತೆಯಲಿ ಕಳೆಯಬೇಕಿಲ್ಲ
ಹಣ ಹಣವೆಂದು ಕೊರಗಬೇಕಿಲ್ಲ
ಅಹಂಕಾರದ ಜ್ವಾಲೆಯಲಿ ಉರಿಯಬೇಕಿಲ್ಲ..
ಮನಸ್ಸನು ಬೆಣ್ಣೆಯಾಗಿಸಿ ಕರಗಬೇಕಿಲ್ಲ
ಚಿಂತೆಯಲಿ ಚಿತೆಯಾಗಬೇಕಿಲ್ಲ
ಕಷ್ಟ ಬಂದರೆ ಕಣ್ಣೀರು ಹಾಕಬೇಕಿಲ್ಲ
ಕೆಟ್ಟ ಕ್ಷಣ ನೆನಸಲು ತಲೆಬೇಕಿಲ್ಲ..
ಸ್ವಾರ್ಥಿ ಜಗತ್ತಿನಲಿ ತ್ಯಾಗಿಸಬೇಕಿಲ್ಲ
ಹಡೆದವ್ವಗೆ ನೋವಿಸಿ ಹುಟ್ಟಬೇಕಿಲ್ಲ
ಾಯುಷ್ಯ ಮುಗಿಯಿತೆಂದು ಸಾಯಬೇಕಿಲ್ಲ
ಸತ್ತವರ ನೆನೆಯುತ ಮರೆಯಬೇಕಿಲ್ಲ

ನೀರ್ಜಿವಿ ಆಗಬೇಕಿತ್ತು
ನಾನು ನೀರ್ಜಿವಿ


ಮೌನವೇದನೆ


ಮನಸ್ಸೆ ಓ ಮನಸ್ಸೆ
ನಿನ್ನಲ್ಲೇಕೆ ಮೌನ ??
ಮಾತನಾಡು ನೀನು 
ಮುದ್ದಾಡಿ ಮಲ್ಲಿಗೆಯಾಗು
ಮುದುಡದಿರು ಮನಸ್ಸೆ
ಮಧುವನದ ಹೂ ಆಗಿರು
ಮೌನ ಒಪ್ಪದು
ಮನಸ್ಸು ಹಗುರಾಗದು
ನೀ ನಕ್ಕಾಗ ತಾನೆ
ಭೂಮಿ ಸುಂದರ ಕಾಣುವುದು
ಮೌನ ಬಿಡು ಮಾತನಾಡು
ವೇದನೆ ಮರೆತುಬಿಡು
ಮೌನದ ಮೋಡವಾಗದಿರು 
ಸಂತಸದ ಬೆಳಕಾಗು
ಮನಸ್ಸೆ ಓ ಮನಸ್ಸೆ
ನಿನ್ನಲ್ಲೇಕೆ ಮೌನ ?
ಮೌನವೇದನೆ ಕಿತ್ತೆಸೆದು 
ನನ್ನ ಅರಗಿಣಿಯಾಗಿರು

ಬುಧವಾರ, ಜನವರಿ 18, 2012

ಎಲ್ಲಿರುವೆ??



ಕಾಯುವೆ ನಿನಗಾಗಿ
ಗಡಿಯಾರದ ಮುಳ್ಳಾಗಿ
ಚಂದ್ರಮನ ಜೊತೆಗೆ
ಬೆಳಂದಿಗಳ ಬೆಳಕಾಗಿ
ನೀ ಬರುವ ವೇಳೆಯಲಿ
ರಂಗೋಲಿಯ ಬಣ್ಣವಾಗಿ
ಸ್ವಾಗತಿಸುವೆ ನಿನ್ನ
ಇಂಪಾದ ಕೋಗಿಲೆಯಾಗಿ
ಅಲಂಕರಿಸುವೆ ನನ್ನ
ಶಿಲ್ಪಿಯ ಶಿಲೆಯಾಗಿ
ಮುಖ ತುಂಬ ನಗುವು
ಅರಳಿದ ತಾವರೆಯಾಗಿ
ಕೊರಳಿಗೆ ಕೋಮಲ
ಮುತ್ತಿನ ಹಾರ ಧರಿಸಿ
ಭಾವನೆಗಳ ಮನದಿ
ನವಿರಾದ ನವಿಲ ನಲಿಸಿ
ಹೃದಯ ತುಂಬ 
ಪ್ರೇಮದ ವೀಣೆ ಬಾರಿಸಿ
ಪ್ರೀತಿಸುವೆ ಜೀವದ
ಎದೆಬಡಿತವಾಗಿ
ಎಲ್ಲಿರುವೆ ? ಇನಿಯ..!
ನಿನ್ನ ಕಾಯುತ 
ಗಡಿಯಾರದ ಮುಳ್ಳು ಮುರಿದಿವೆ
ಬೆಳಂದಿಗಳು ದೂರಾಗಿ
ಅಮವಾಸ್ಯೆ ಬಂದಿದೆ
ಮನಸ್ಸು ಕೇಳದು 
ಪ್ರೀತಿ ಬಿಡದು
ಕಾಯುವೆ ನಿನ್ನ.. ಮುಂಬರುವ
ಹುಣ್ಣಿಮೆ ರಾತ್ರಿಗಾಗಿ

ಮಂಗಳವಾರ, ಜನವರಿ 17, 2012

-ನ್ಯಾಯದಿಂದ ಅನ್ಯಾಯ -





ನ್ಯಾಯ ನೀಡುವರೆ
ಅನ್ಯಾಯ ಎಸೆದಾಗ
ನ್ಯಾಯಕ್ಕೇನು ಬೆಲೆ ?
ವಕೀಲರಿಗಿದೆಯೇ ತಲೆ ?
ಚಿಕ್ಕ ತಪ್ಪು ನಡೆದರೂ
ದೊಡ್ಡ ಬೆಟ್ಟ ತೋರಿಸಿದಾಗ
ಎಲ್ಲಿರುವುದು ಕ್ಷಮೆ?
ಸಾರ್ವಜನಿಕರಲ್ಲೇಕೆ ತಾಳ್ಮೆ ?
ದಿನವಿಡಿ ನಡೆಸಿದ ರಸ್ತೆತಡೆ
ಜನರಿಗೆ  ಶಿಕ್ಷೆ  ಬಿರುಬಿಸಿಲನೆಡೆ
ಕಳೆದು ಹೋಗಿತ್ತಾ ನ್ಯಾಯ ಬುದ್ಧಿ ?
ಸಾರ್ವಜನಿಕರೆ ಇವರ ಅಹಂಕಾರವ ಗುದ್ದಿ / ಒದ್ದಿ
ಶಿಕ್ಷೆ ಪಡೆದ ನಾಗರಿಕರೆ
ಏಳಿ ಎದ್ದೇಳಿ..
ಅನ್ಯಾಯ ಎಸೆದಾಗ
ನ್ಯಾಯವೆಲ್ಲಿದೆ ಎಂಬ ಪ್ರಶ್ನೆ ಕೂಗಿ ಕೂಗಿ ಕೇಳಿ
ಸಿಗದಿ ನಿಮಗೆ ಉತ್ತರ 
ಕಾರಣ ಅಧಿಕಾರದ ಒತ್ತಡ
ಮನೆ ಮಾಡಿದೆ ಧೈರ್ಯವಿಲ್ಲದ ಹೆದರಿಕೆ
ಭೃಷ್ಟಾಚಾರ್ಯಕ್ಕಿಲ್ಲ ನಿಮ್ಮಗಳ ಬೆದರಿಕೆ
ಬಣ್ಣಿ ಹೋರಾಡೋಣ..
ನ್ಯಾಯದ ಬಾಗಿಲು ತೆರೆಯೋಣ..
ಅನ್ಯಾಯವ ಸುಟ್ಟು ಹಾಕೋಣ


ನನ್ನ ಕೂಗು ರಸ್ತೆಯಲಿ ನಿಂತು ಕಾದವರಿಗಾಗಿ
ರೋಗಿಗಳು ಅನುಭವಿಸಿದ ನೋವಿಗಾಗಿ
ವಿದ್ಯಾರ್ಥಿಗಳು ಕಲಿಯದ ಅಭ್ಯಾಸಕ್ಕಾಗಿ
ನೌಕರರು ಪಡೆಯದ ಒಂದು ದಿನದ ಸಂಬಳಕ್ಕಾಗಿ
ಪ್ರಯಾಣಿಕರು ಪಡೆದ ನಷ್ಟ ಟಿಕೆಟ್ಟು ಖರ್ಚಿಗಾಗಿ
ಒಟ್ಟಿನಲ್ಲಿ ನಾಗರಿಕರಿಗೆ ನ್ಯಾಯ ದೊರೆಯಲಿಲ್ಲೆಂಬುದಕ್ಕಾಗಿ ಗೆಳೆಯ/ಗೆಳತಿಯರೆ ನನ್ನಿ ಕವನ..

ಸೋಮವಾರ, ಜನವರಿ 16, 2012

-ಹಳ್ಳಿಯ ಸೊಗಸು-




ಕೋಳಿ ಕೂಗಿನಿಂದ ಶುರುವಾಗುವ ಬೆಳಕು
ಸೂರ್ಯೋದಯ ಮೊದಲೇ ಓಡಿಸುವವರು ಕೊಳಕು
ರಂಗವಲ್ಲಿ ಬಿಡಿಸಿದರೆ ಮನೆ ಥಳಕು ಬಳಕು

ರೊಟ್ಟಿ ಪಲ್ಲೆ ಮೊಸರು ಮುಂಜಾನೆ ತಿಂಡಿ
ಕುಡಿಯುವರು ಹಸಿಹಾಲು ಎರಡೆರಡು ಗಿಂಡಿ
ಥಟ್ಟನೆ ಬಡಿಯುವರು ಸಗಣಿಯ ಉಂಡೆ

ಎಳೆ ಬಿಸಿಲ ಜೊತೆಗೆ ಗದ್ದೆಗೆ ಪಯಣ
ಭೂಮಿ ತಾಯಿ ಮಡಿಲಲಿ ಈ ರೈತರ ಜನನ
ಪೂಜಿಸುವ ದೇವರೇ ವರುಣ

ಖುಷಿಯ ಸಂಭ್ರಮವೇ ಇವರ ಸುಗ್ಗಿ
ಊಟದಲಿ ಸಿಹಿಯಾದ ಹೋಳಿಗೆ ಹುಗ್ಗಿ
ಹಿರಿಯರಿದ್ದರೆ ನಡೆವರು ತಗ್ಗಿ ಬಗ್ಗಿ

ಮನೆಕೆಲಸದ ಜೊತೆಗೆ ಆಟ ಪಾಠ
ಶ್ರೀಮಂತ ಹೃದಯಕೆ ತಿಳಿದಿಲ್ಲ ಜೂಜಾಟ
ಇವರಿಗಿಲ್ಲ ನಿದ್ರಾಹೀನತೆಯ ಕಾಟ

ಹಣದ ಮೋಹವಿಲ್ಲದ ನೆಮ್ಮದಿ ಜೀವನ
ಪ್ರೀತಿ ಸಂಬಂಧ ಬಾಳಿಗೆ ಸಾಧನ
ಹಳ್ಳಿ ಜೀವಿಗಳ ಬದುಕು ಪಾವನ

ಗುರು ಹಿರಿಯರಿಗೆ ಗೌವರದ ನಮಸ್ಕಾರ
ಮಕ್ಕಳಲಿ ಬೆಳೆಸುವರು ಒಳ್ಳೆಯ ಸಂಸ್ಕಾರ
ಕಷ್ಟದಲೂ ನಗುತ ಜೀವನ ಸಾಗಿಸುವುದೆ ಹಳ್ಳಿಯ ಚಮತ್ಕಾರ

ಪ್ಯಾಟೆ ಲೈಫು..


ಹೊಟ್ಟೆಗಿಲ್ಲ ವೇಳೆ
ಸುರಿಯುವುದು ಚಿಂತೆಗಳ ಮಳೆ
ಮುಖದ ಮೇಲಿಲ್ಲ ಮಮತೆಯ ಕಳೆ
ಮಾಲಿನ್ಯದಿಂದ ನಶಿಸಿದೆ ಹಳ್ಳಿಯ ಬೆಳೆ

ಸಂಬಂಧಗಳಲ್ಲೂ ನೋಡುವರು ವಾಸ್ತು
ಚಿಕ್ಕ ಚಿಂದಿ ಬಟ್ಟೆಗಳೆ ಶಿಸ್ತು
ಹಣವೇ ಪ್ರೀತಿಯ ವಸ್ತು
ವಾರಕ್ಕೊಂದು ಪಾರ್ಟಿ ನೈಟ್ ಮಸ್ತು

ದಾರಿಯಲೆ ಸಿಲುಕಿದೆ ಮನಸ್ಸಿನ ಟ್ರಾಫಿಕ್ಕು
ಪೋಜು ನೀಡೊ ಕೆಲಸ ಓದುವುದು ಮ್ಯಾಟ್ರಿಕ್ಕು
ಸರ್ಕಾರ ಸಹಾಯಕೆ ನಗರವೇ ಹ್ಯಾಟ್ರಿಕ್ಕು
ಕೆಟ್ಟ ಚಟ ನೀಡುವುದು ಯಮನ ಟಿಕೆಟ್ಟು

ಬಿಂದಾಸ್ ಆಗಿರೊದೆ ಕೆಲವರ ಲೈಫು
ಮದುವೆ ಮೊದಲೇ ಆಗುವರು ವೈಫು
ಜೇಬಿನಲ್ಲಿದೆ ಅಹಂಕಾರದ ನೈಫು
ಹೀಗಿದೆ ನೋಡಿ ಕೆಲವರ ಪ್ಯಾಟೆ ಲೈಫು

( ಎಲ್ಲ ಪ್ಯಾಟೆಯವು ಹೀಗಿರುವುದಿಲ್ಲ.. ಕೆಲವರು ಮಾತ್ರ)

ಕವನ



ಕವನವೆಂದರೆ
ಕವನದಲ್ಲಿರುವ ಅವಳು
ಪದಗಳನ್ನು ಕೂದಲೆಳೆಯೆಂದು
ತಿಳಿದು ಬೆಳೆಸಿದವಳು
ಪ್ರಾಸಗಳೆಂಬ ನಯನಗಳಿಂದ
ಸೆಳೆಯುವವಳು
ಭಾವನೆಗಳ ಜೊತೆ ಬೆರೆತವಳು
ಕಲ್ಪನೆಯನು ಕವನವೆಂದು ಬರೆದವಳು
ಹೃದಯದ ಪುಟವ ಕೆಲ ಶಬ್ದಗಳಲಿ
ಅಲಂಕರಿಸುವವಳು
ಪದಗಳ ಕೈ ಬೆರಳಿನಿಂದ ಓದುಗರನ್ನು
ಕರೆತರುವಳು
ಎದೆ ಬಡಿತ ಹೆಚ್ಚಾಗಲು ಪ್ರೀತಿ ಅರ್ಥದ
ಮುತ್ತೊಂದು ಕೊಡುವಳು
ಕವನದ ಹೆಸರು ಬರೆಯಬೇಕಿಲ್ಲ ಇವಳಿಗೆ
ಕಾರಣ ಕವನದಲ್ಲಿರುವವಳೇ ಇವಳು

ಗುರುವಾರ, ಜನವರಿ 12, 2012

ಮನಸ್ಸು..

 
   ಕಳೆದು ಹೋಗಿವೆ ಆ ದಿನಗಳು
ನೆನಪುಗಳು ಕಲೆಯಾಗಿ ಮೂಡಿವೆ
   ಗೆಳೆಯ ನಿನ್ನ ಮಾತುಗಳು
ಶಬ್ದಕೋಶವಾಗಿ ಉಳಿದಿವೆ
   ಜೊತೆಗೆ ನೀನಿರುವಾಗ ಸಾಧನೆಗಳು
ಲೋಕಲ್ ಬಸ್ಸಿನ ಕಿಟಕಿಯಂತಿವೆ
   ಆ ಕಿಟಕಿಯಿಂದಲೆ ಕಾಣುವ ಕನಸುಗಳು
ನಡು ದಾರಿಯಲ್ಲಿಯೇ ಕರೆದಿವೆ
   ತಣ್ಣನೆ ಸೂಸುವ ಭಾವನೆಗಳು
ಗಾಳಿಯ ಜೊತೆ ಪಯಣ ಬಯಸಿವೆ
   ಕನಸಿಗಾಗಿ ಹೊರಟ ಮನಸ್ಸಿನ ಬಾಗಿಲುಗಳು
ಲೋಕಲ್ ಬಸ್ ನ ಕಿಟಕಿಗಳ ಮರೆತಿವೆ
   ಮನಸ್ಸಿಗೆ ಮುತ್ತಿದ ಕನಸ್ಸಿನ ರೆಕ್ಕೆಗಳು
ಆಗಸದೆತ್ತರಕೆ ಕರೆದೋಯ್ದಿವೆ
   ನಿಲ್ಲಾಣದಲಿ ಬಸ್ಸಿಗೆ ಬ್ರೇಕ್ ಹಾಕಿದಾಗ
ದೇಹ ತನ್ನ ಮನಸ್ಸಿಗಾಗಿ ಒದ್ದಾಡಿದೆ
   ನೆನಪಿಸಿದೆ ನಾ ನಿನ್ನ ಗೆಳೆಯ
ನೀನೆ ನನ್ನ ಮನಸ್ಸಿನ ಒಡೆಯ
   ನಿನ್ನ ಕಂಡ ಕ್ಷಣವೇ ಮನವು
ನಾಚಿಕೆಯಿಂದ ಕಿಟಕಿಯಲ್ಲೆ ಪ್ರೀತಿಸು ಎಂದಿದೆ


ಬುಧವಾರ, ಜನವರಿ 11, 2012

* ಕಂಡ ಕಂಡವರನ್ನ ಕಂಡಿದ್ದೆ *



 ಕಂಡ ಕಂಡವರನ್ನ ಕಂಡಿದ್ದೆ

ಕೆಂಡದಲ್ಲಿ ಅರಳಿದ ಸಂಪಿಗೆಯನ್ನ

ಸಂಪಿಗೆಯಲ್ಲಿರುವ ಸುವಾಸನೆಯನ್ನ

ಸುವಾಸನೆಯಲಿ ಮುಳುಗಿ ನಗುವವರನ್ನ ಕಂಡಿದ್ದೆ



 ಕಂಡ ಕಂಡವರನ್ನ ಕಂಡಿದ್ದೆ

ಕೆಂಪಗೆ ಕಂಡರು ಕೆಟ್ಟವರಿರುವುದನ್ನ

ಕೆಟ್ಟವರಲ್ಲಿಯ ದ್ವೇಷದ ಕೆಂಡವನ್ನ

ಕೆಂಡದಲ್ಲಿಯೇ ಕ್ರೋಧಕೆ ಬಲಿಯಾದವರನ್ನ ಕಂಡಿದ್ದೆ



 ಕಂಡ ಕಂಡವರನ್ನ ಕಂಡಿದ್ದೆ

ಗುಡಿಸಲಲ್ಲಿರುವ ಬಡವರನ್ನ

ಬಡವರ ದುಡಿಮೆಯ ಬೆವರನ್ನ

ಬೆವರಿದ ಮೈಗೆ ಅನ್ನ ಉಣಿಸಿ ಖುಷಿಯಾಗಿರುವವರನ್ನ ಕಂಡಿದ್ದೆ



 ಕಂಡ ಕಂಡವರನ್ನ ಕಂಡಿದ್ದೆ

ಕತ್ತಲನ್ನ ಬೆಳಕೆಂದು ತಿಳಿದವರನ್ನ

ತಿಳಿದ ಮನಸ್ಸಿನ ಭಾವಗಳ ದೀಪವನ್ನ

ದೀಪದಿಂದ ಕತ್ತಲನು ಓಡಿಸಿ ಬೆಳಗುವವರನ್ನ ಕಂಡಿದ್ದೆ



 ಕಂಡ ಕಂಡವರನ್ನ ಕಂಡಿದ್ದೆ

ದೇಶಸೇವೆಯೆ ಈಶಸೇವೆ ಎಂದುವರನ್ನ

ಎಂದಿಗೂ ಅಳಿಸದ ದೇಶಪ್ರೇಮವನ್ನ

ದೇಶಪ್ರೇಮದಲ್ಲಿ ರಕ್ಷಣೆಗಾಗಿ ಮಡಿದವರನ್ನ ಕಂಡಿದ್ದೆ



 ಕಂಡ ಕಂಡವರನ್ನ ಕಂಡಿದ್ದೆ

ಒಂದು ತುತ್ತು ಅನ್ನಾದರೂ ಹಂಚುವವರನ್ನ

ಹಂಚಿದ ಹೃದಯಕೆ ಸಿಗುವ ತೃಪ್ತಿಯನ್ನ

ತೃಪ್ತಿಯಲ್ಲಿ ತಾವು ಹಸಿದವರೆಂದು ಮರೆಯುವವರನ್ನ ಕಂಡಿದ್ದೆ



 ಕಂಡ ಕಂಡವರನ್ನ ಕಂಡಿದ್ದೆ

ರಕ್ತಸಂಬಂಧವಿಲ್ಲದೆ ಜೀವಾಳವಾಗುವವರನ್ನ

ಜೀವಾಳ ಜೀವಿಗಾಗಿ ತ್ಯಾಗಿಸುವ ಭಾವವನ್ನ

ಭಾವನೆಯಲಿ ಬಂಧಿಸಿ ಅಮರ ಪ್ರೀತಿಸುವವರನ್ನ ಕಂಡಿದ್ದೆ



 ಕಂಡ ಕಂಡವರನ್ನ ಕಂಡಿದ್ದೆ

ಕೆಂಡದಲಿ ಬೆಂದರೂ ನಗುವವರನ್ನ

ನಗುತ ನಗಿಸುತ ನವಿರಾಗುವುದನ್ನ

ನವಿರಾಗಿ ಕೆಂಡವ ಕೆಂಪು ಸುಮವಾಗಿ ಅರಳಿಸುವವರನ್ನ ಕಂಡಿದ್ದೆ




ಮಂಗಳವಾರ, ಜನವರಿ 10, 2012

ಜಾತಿಗೆ ನೇಣು ಯಾವಾಗ ??


ಸಮವಿಲ್ಲದಿರುವಾಗ ಸುಖವೆಲ್ಲಿ 
ಸುಖವಿಲ್ಲದಿರುವಾಗ ಬದುಕೆಲ್ಲಿ
ಬದುಕೆಲ್ಲ ಜಾತಿ ದ್ವೇಷ ತುಂಬಿರುವಾಗ 
ಪ್ರೀತಿ ಬೆಳೆಯುವುದೆಲ್ಲಿ ?
ನನ್ನದೊಂದು ಪ್ರಾರ್ಥನೆ ಜಾತಿಯ ಮರಣವಾಗಲಿ

ಸ್ವಾರ್ಥದ ಉಡುಪು ತೊಟ್ಟಾಗ 
ಶುಭ್ರತೆ ಎಲ್ಲಿ ?
ನಂಬಿಕಸ್ತನಿಲ್ಲದಿರುವಾಗ 
ಸಂಬಂಧಗಳೆಲ್ಲಿ ?
ಬದುಕೆಲ್ಲ ಕಪಟ ದ್ರೋಹ ತುಂಬಿರುವಾಗ 
ಪ್ರೀತಿ ಬೆಳೆಯುವುದೆಲ್ಲಿ ?
ನನ್ನದೊಂದು ಪ್ರಾರ್ಥನೆ ಜಾತಿಯ ಮರಣವಾಗಲಿ

ಅಹಂಕಾರದ ಕಿರೀಟವಿರುವಾಗ
ನಯ ನಮ್ರತೆ ಎಲ್ಲಿ ?
ಭಾವನೆಗಳೇ ನಶೆಯಲ್ಲಿರುವಾಗ
ಹಸಿದ ಹೊಟ್ಟೆಗೆ ಅನ್ನವೆಲ್ಲಿ ?
ಬದುಕೆಲ್ಲ ಸ್ವಾರ್ಥ ಹಿಂಸೆ ತುಂಬಿರುವಾಗ 
ಪ್ರೀತಿ ಬೆಳೆಯುವುದೆಲ್ಲಿ ?
ನನ್ನದೊಂದು ಪ್ರಾರ್ಥನೆ ಜಾತಿಯ ಮರಣವಾಗಲಿ

ಕೆಟ್ಟವಿಚಾರ ನಮ್ಮದಿರುವಾಗ 
ನಾವು ಮನುಜರೆಲ್ಲಿ ?
ಮುಂದೆ ಮರಣವಿರುವಾಗ
ಜಾತಿ ಭೇದದ ಮಹತ್ವವೆಲ್ಲಿ ?
ಬದುಕೆಲ್ಲ ಲಿಂಗಭೇದ ಕೆಟ್ಟಭಾವ ತುಂಬಿರುವಾಗ 
ಪ್ರೀತಿ ಬೆಳೆಯುವುದೆಲ್ಲಿ ?
ನನ್ನದೊಂದು ಪ್ರಾರ್ಥನೆ ಜಾತಿಯ ಮರಣವಾಗಲಿ
ಈ ಪ್ರಾರ್ಥನೆ ದೇವರಿಗಲ್ಲ 
ಮಾನವರಲ್ಲಿ ?
ಮಾನವನೇ ಜಾತಿ ಹುಟ್ಟಿಸಿದವನು 
ದೇವರೆಲ್ಲಿ ?
ಈ ಜಗತ್ತಿನಲ್ಲಿ ಜಾತಿಯ ಮರಣವಾದರೆ
ಬದುಕು ಬದುಕಲ್ಲ ..
ಇದು ಭಾವದರಮನೆ ಸತ್ಯವಾಸನೆ 
ಸುಖದ ಹಂದರ ಶಾಂತಿ ಮಂದಿರ 
ಪ್ರೀತಿಗಾಯನ ಭೂಮಿಪಾವನ 

ಸೋಮವಾರ, ಜನವರಿ 9, 2012

ಮಾತಿಗೂ ಸಾವು



ಇನಿಯಾ , ವಚನ ನೀಡಿದ್ದೆ ನೀನು 
ನನ್ನ ಮರೆಯಲಾರೆನೆಂದು 
ಮರೆತಿದ್ದೆ ನೀನು ಇನಿಯ 
ಮರೆಯಲಾರದನ್ನು 
ನಿನ್ನಾಲದ ನೆನಪಿಗೆ ನಾ 
ಭೇಟಿ ನೀಡಿದರೆ
ನೀನಾರೆಂದು ಕೇಳಿವೆ 
ನಿನ್ನ ಮನಸ ದ್ವಾರಗಳು 
ಬಿಕ್ಕಿ ಅಳುವ ನನ್ನ ಭಾವನೆಗೆ 
ರಮಿಸುವರಾರು ???
ಇನಿಯ, ನೀನಿಲ್ಲದ ಜೀವನ ಬೇಡವೆಂದ 
ವಚನ ಪಡೆದ ನನ್ನ ಅಂತರಂಗ 



ಕಾಯಿಲೆ



ಬೇಡವೆಂದರೂ ಬರುವೆ 
ದೂರ ಓಡಿದರು ಕರೆವೆ 
ದ್ವೇಷಿಸುವೆ ನಾ ನಿನ್ನ 
ಏಕೆ ಪ್ರೀತಿಸುವೆ ನೀ ನನ್ನ 
ಸೋತೆನು ನಾ ಜೀವನಕೆ
ಬೇಸರಿಸಿದೆ ನಾ ನಿನಗೆ 
ಬೆಲೆಯಿಲ್ಲವೇ ? ನನ್ನ ಸುಖಕೆ
ದು:ಖಿಸಿದೆ ನೀ ಒಂದೇ ಸವನೆ 
ನೀ ಕಾನಿದರೆ ನೆನೆವರು ನನ್ನ 
ತಲೆನೋವೆಂದು ಕರೆವರು ನನ್ನ ಹೆಸರನ್ನ