ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಮೇ 5, 2012

ಬರದ ಜ್ವರ ಬಿಡಿಸು ಬಾ ಮಳೆರಾಯ



ಬೇಸಿಗೆಯ ದಿನಗಳಿವು 
ಬರಗಾಲದ ಕ್ಷಣಗಳಿವು
ಮಳೆ ಬೆಳೆ ಇಲ್ಲದೆ ಬತ್ತಿದೆ ನೆಲವು 
ಸೂರ್ಯನ ತಾಪಕೆ ಕರಗಿವೆ ಹೊಳೆ ಕೆರೆಯು
ಕುಡಿಯಲು ನೀರಿಲ್ಲ, ಬೆಳೆಯಲು ಮಳೆಯಿಲ್ಲ 
ಬೆಳೆ ಇಲ್ಲದೆ ಧನ ಧಾನ್ಯಗಳಿಲ್ಲ
ಹಸಿದ ಹೊಟ್ಟೆಯಲಿ ಹಳಸಿದೆ ಅನ್ನವೆಲ್ಲ 
ಕೊಳೆ ಬಟ್ಟೆ ತೊಳೆಯಲು ಜಲವೇ ಇಲ್ಲ
ಶಾಂತ ಸಹನೆ ಜನರಿಗಿಲ್ಲ , ಸ್ವಾರ್ಥ ತುಂಬಿದೆಯಲ್ಲ 
ಶ್ರಮಿಸುತಿದೆ ಕಾರ್ಯ ನಿರ್ವಹಿಸುತಿದೆ ಸರಕಾರ 
ನೀರು ತಯಾರಿಸಲು ರಾಜಕಾರಣಿಗಳಲ್ಲ ಜಾದೂಗಾರ 
ಎಲ್ಲರ ಮಿತ ಬಳಕೆಯೆ ಸಮಸ್ಯೆಗಿರುವ ಪರಿಹಾರ 
ಹೊಳೆ ರಚಿಸಬೇಕು ನಿಸರ್ಗವೆಂಬ ಕಲೆಗಾರ
ಬಾಯಾರಿಸಿದ ಗದ್ದೆಗಳು 
ಒಣಗಿವೆ ಎಮ್ಮೆ- ಎತ್ತುಗಳು
ಕಂಗಾಲಾದ ಬಡವರ ಹೃದಯಗಳು 
ಗ್ರಾಮೀಣ ಜನತೆಯ ಹಾಹಾಕಾರ 
ಪ್ರತಿಭಟನೆಗೆ ವಿರೋಧ ಪಕ್ಷ ಸಲಹೆಗಾರ
ಸರಕಾರ  ತೊಟ್ಟಿರುವುದು ಸಮಸ್ಯೆಯ ಹಾರ 
ಭೂತಾಯಿಯ ಕರುಣೆಯಡಿ ಬರಲಿ ಸಂತೈಸಲು ಮಳೆಗಾರ 

2 ಕಾಮೆಂಟ್‌ಗಳು: