ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಸೋಮವಾರ, ಜುಲೈ 4, 2011

ನನ್ನ ಕವನ ಸಂಕಲನದ ಆನಂದ

                                                    

       ಅಂದು ಜೂನ್ ೩೦, ಗುರುವಾರ ಸಂಜೆ ೬ ರ ಹೊತ್ತು ನನ್ನ "ಹಸೆಯ ಮೇಲಣ ಹಾಡು" ಎಂಬ ಚೊಚ್ಚಲ ಕವನ ಸಂಕಲನದ ಬಿಡುಗಡೆ ಸಮಾರಂಭ.ಮರೆಯಲಾರದ ಸ್ಮರಣೀಯ ದಿನದ ಅಮೃತ ಗಳಿಗೆಯದು . ಎರಡು ವರ್ಷದಲ್ಲಿ ನಾ ಕಂಡ ಕನಸ್ಸನ್ನು ನನಸಾಗಿ ಮಾಡಿದ    " ನನ್ನೆದೆಯ ಬಡಿತ 
                                ಪ್ರೀತಿಯ ಉಸಿರು 
                                ಒಲುಮೆಯ ಜೀವ ಜೀವಾಳ 
                                ಸಂಗಾತಿ ಡಾ.ಸಿದ್ದು ಅವರಿಗೆ ಅರ್ಪಣೆ ಮಾಡಿದ ಕವನ ಸಂಕಲನವಿದು.ನನ್ನ ದಾಂಪತ್ಯ ಜೀವನದಿಂದ ಆಯ್ದ ಪ್ರೀತಿಯ ಹನಿಗಳನ್ನು ಪೋಣಿಸಿ ಸುಂದರ ಹಾರವನ್ನು ಧರಿಸಿ ಹಸೆಯ ಮೇಲಿರುವಾಗ ಮೌನದ ಮನದಲ್ಲಿ ಮೂಡಿದ ಕವಿತೆಗಳಿವು.ಅವು 'ಹಸೆಯ ಮೇಲಣ ಹಾಡು'.
      ವಿಜಾಪೂರದ ಬುದ್ಧಿಜೀವಿ ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಹಸ್ತದಿಂದ ಲೋಕಾರ್ಪಣೆಗೊಂಡ ನನ್ನ ಕವನ ಸಂಕಲನ ಬಹಳ ಪುಣ್ಯಗಳಿಸಿತ್ತು. ಆ ದಿನದ ಮತ್ತೊಂದು ವಿಶೇಷವೆಂದರೆ ಕವಿಗೊಷ್ಟಿಯು ಆಯೋಜಿಸಲಾಗಿತ್ತು. ನಾನು ಜಸ್ಟ್ ಪಾಸ್ ಆಗಿ ಕವಯತ್ರಿ ಪದವಿ ತೆಗೆದುಕೊಳ್ಳುತ್ತಿದ್ದೆ ಆದರೆ ಅಲ್ಲಿ ಉಳಿದ ೧೧ ಕವಿಗಳು ತುಂಬಾ ಮೆಚ್ಚುಗೆ ಪಡೆದವರಾಗಿದ್ದರು.ಅವರ ಜೊತೆ ನನಗೆ ಕವನ ಓದಲು ತುಂಬಾ ಖುಷಿಯೇನಿಸಿತ್ತು.ಅದೇ ದಿನ ಕವಿ ಮತ್ತು ಲೇಖಕ ಕಲ್ಲೇಶ ಕುಂಬಾರ ಅವರ 'ಉರಿಯ ನಾಲಿಗೆಯ ಮೇಲೆ' ಕಥಾಸಂಕಲನ ಲೋಕಾರ್ಪಣೆಯಾಯಿತು. 
      ಕವನ ಬರೆಯುವ ಕಲೆ ತವರಿನಲ್ಲಿ ಮೊಳೆತದ್ದು,ಚಿಗುರಿದ್ದು ಸಪ್ತಪದಿಯಲ್ಲಿ, ಹೂತಿದ್ದು ನಮ್ಮ ದಾಂಪತ್ಯದ ಹಸೆಯಲ್ಲಿ.ನನ್ನ ಬದುಕನ್ನು ಒಪ್ಪಿ ಅಪ್ಪಿ ಎದೆಯಲ್ಲಿ ಕವಿತೆಯ ಒರತೆ ತೊಡಿದವರು ನನ್ನ ಸಂಗಾತಿ.ಅವರೇ ನನ್ನ ಬದುಕಿನ ಪ್ರೀತಿಯ ಪ್ರತೀಕ.
      ನನ್ನ ಗುರುಗಳಾದ ಡಾ.ವಿ.ಎಸ.ಮಾಳಿಯವರು ಹಾರೂಗೆರಿಯವರು.ನನ್ನ ಕವನ ಸಂಕಲನದ ಹಿಂದಿನ ಪುಟವನ್ನು ತಮ್ಮ ಮನಸ್ಸಿನ ಚೆಂದಾದ ಮಾತುಗಳಿಂದ ಅಲಂಕರಿಸಿದವರು. ಇವರು ಹೇಳಿದ್ದು- 'ಕವಿತೆಗಳೆಂದರೆ ಅಕ್ಷರಗಳಲ್ಲಿ ಸಂವೇದನೆಗಳ ಸಾಕ್ಷಾತ್ಕಾರ'. ಮದುವೆಯ ಹೊಸತರಲ್ಲಿ ಕ್ಷಣ ಕ್ಷಣಗಳೆಲ್ಲ ಸುಂದರ ಮತ್ತು ಮಧುರ.ಸಲ್ಲಾಪದ ಮುದ್ದು ಮುದ್ದು ಮಾತುಗಳು ಜೇನಿನಲ್ಲಿ ಅದ್ದಿ ಇಟ್ಟಂತೆ ಕೀರ್ತಿಯವರ ಕವಿತೆಗಳು ಜಾಮೂನಿನಂತೆ! ಮುದ್ದನನಂಥ ಗಂಡನಿಗೆ ಮನೋರಮೆಯಮ್ಥ ಹೆಂಡತಿ ಜತೆಯಾದಾಗ ಇಂಥದೊಂದು 'ದಾಂಪತ್ಯ ಕಾವ್ಯ'ಹುಟ್ಟಿಕೊಳ್ಳುತ್ತದೆ.
     ಈ ಸಂಕಲನ ಹೊರಬರಲು ಪ್ರೇರಣೆ ನೀಡಿದ ಎಲ್ಲ ಬ್ಲಾಗ ಸ್ನೇಹಿತ-ಸ್ನೇಹಿತೆಯರೆಲ್ಲರಿಗೂ ನನ್ನ ಪ್ರೀತಿಯ ಕೃತಜ್ನ್ಯತೆಗಳು.ನನ್ನ ಕವನಗಳಿಗೆ ನೀವು ನೀಡಿದ ವಿಶ್ವಾಸ,ಪ್ರೀತಿ, ಸಹಕಾರ ಮತ್ತು ಸ್ಪೂರ್ತಿಗೆ ನನ್ನ ಅನಂತ ಧನ್ಯವಾದಗಳು .ಕೊನೆಯದಾಗಿ ಈ ಕೀರ್ತಿಯ ಕನಸು ನನಸಾಗಿಸಲು ಸಹಕರಿಸಿ ಹರಸಿರಿ.


10 ಕಾಮೆಂಟ್‌ಗಳು:

  1. ಕೀರ್ತಿ ಮನಃಪೂರ್ವಕ ಅಭಿನಂದನೆಗಳು ಮತ್ತು ನಿಮ್ಮ ಕವನ ಸಂಕಲನದ ಅಪೂರ್ವ ಯಶಸ್ಸಿಗೆ ಹಾರೈಕೆಗಳು...ದಯವಿಟ್ಟು ಆಗಸ್ಟ್ ೨೧ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣಕ್ಕೆ ಬನ್ನಿ. ನಮ್ಮ ಬ್ಲಾಗ್ ಗೆಳೆಯರಾದ ಸುಧೇಶ್ ಶೆಟ್ಟಿ (ನೀನ್ ಬರುವ ಹಾದಿಯಲ್ಲಿ ಕಾದಂಬರಿ) ಜೊತೆಗೆ ಉಮೇಶ್ ದೇಸಾಯಿ ಮತ್ತು ದೊಡ್ಡಮನಿ ಮಂಜು ರವರ ಕವನ ಸಂಕಲನಗಳ ಬಿಡುಗಡೆಯಿದೆ... ನಿಮ್ಮ ಕವನ ಸಂಕಲನವನ್ನೂ ತನ್ನಿ ಸುಮಾರು ಪ್ರತಿಗಳು...ನಾನಂತೂ ಕೊಡ್ಕೋತೇನೆ...
    ಅಭಿನಂದನೆಗಳು ಮತ್ತೊಮ್ಮೆ.

    ಪ್ರತ್ಯುತ್ತರಅಳಿಸಿ
  2. ಕೀರ್ತಿ, ಅಭಿನಂದನೆಗಳು ....
    ಮತ್ತಷ್ಟು ಪುಸ್ತಕಗಳು ನಿಮ್ಮಿಂದ ಹೊರ ಬರಲಿ....
    'ಕವಿತೆಗಳೆಂದರೆ ಅಕ್ಷರಗಳಲ್ಲಿ ಸಂವೇದನೆಗಳ ಸಾಕ್ಷಾತ್ಕಾರ' ನಿಜಾ....

    ಪ್ರತ್ಯುತ್ತರಅಳಿಸಿ
  3. ಜಲನಯನ ಅವರಿಗೆ ನನ್ನ ಮನಸ್ಸಿನ ಆಳದಿಂದ ಧನ್ಯವಾದಗಳು ..
    ಆಗಸ್ಟ್ ೨೧ಕ್ಕೆ ನಾನು ನಿಮ್ಮನ್ನು ಭೇಟಿಯಾಗಲು ಖಂಡಿತ ಪ್ರಯತ್ನಿಸುವೆ..
    ನಿಮ್ಮಂಥ ಜ್ಞಾನಿಗಳ ಭೇಟಿ ಅಂದರೆ ಬೆಳಕಿನಲ್ಲೂ ನಕ್ಷತ್ರ ನೋಡಿದ ಹಾಗೆ..
    ನಿಮ್ಮ ಆಮಂತ್ರಣಕ್ಕೆ ನಾನು ಋನಿಯಾಗಿರುವೆ..

    ಬಯಸದೆ ಬಂದಿರುವ ಭಾಗ್ಯವಿದು
    ನಿಮ್ಮಮ್ಥವರಿಂದ ಅಭಿನಂದನೆಯು
    ನನ್ನ ಕವನಗಳಿಗೆ ನಿಮ್ಮಂಥ ಕವಿಗಳ
    ಪ್ರೀತಿಯ ಸಲಹೆಗಳಿರಲಿ
    ನಿಮ್ಮ ಆಶೀರ್ವಾದ ಈ ಪುಟ್ಟ ಕವಿಯತ್ರಿಗೆ
    ಮಹಾಕವಿಯಾಗುವ ಭರವಸೆ ಮೂಡಿಸಲಿ
    ಧನ್ಯವಾದಗಳೊಂದಿಗೆ ಕನಸಿನಲ್ಲೂ ನನಸಾಗುವ
    ಕನಸನ್ನು ಕಾಣುವ ಈ ಕೀರ್ತಿ..

    ಪ್ರತ್ಯುತ್ತರಅಳಿಸಿ
  4. ಮಹೇಶ ಸರ್ ನಿಮ್ಮ ಅಭಿನಂದನೆಗೆ ತುಂಬ ಧನ್ಯವಾದಗಳು ..

    ಪ್ರತ್ಯುತ್ತರಅಳಿಸಿ
  5. 'ಕವಿತೆಗಳೆಂದರೆ ಅಕ್ಷರಗಳಲ್ಲಿ ಸಂವೇದನೆಗಳ ಸಾಕ್ಷಾತ್ಕಾರ'. ಬಹಳ ಅಮೂಲ್ಯವಾದ ಮಾತು. ನಿಮ್ಮ ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು.

    ಪ್ರತ್ಯುತ್ತರಅಳಿಸಿ
  6. @prabha ನಿಮ್ಮ ಹಾರೈಕೆಗೆ ತುಂಬ ಧನ್ಯವಾದಗಳು ...

    ಪ್ರತ್ಯುತ್ತರಅಳಿಸಿ