ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಜನವರಿ 25, 2012

ಭಾರತಾಂಬೆ



ಬರೆಯಬೇಕೆಂದೆ ನಾನೊಂದು ಕವನ ಮುಂಜಾನೆಯಲಿ
ಭಾವದ ಕುಸುಮ ಅರಳಿದ ದಿನವಾಗಲಿ
ಭಾರತಾಂಬೆಯ ಮಡಿಲಿಗೆ ಮತ್ತೆ ಮಹಾತ್ಮರು ಹುಟ್ಟಿ ಬರಲಿ
ನಾನು ನನ್ನ ಸ್ವಾರ್ಥ ತೊಲಗಿ ನಾವು ಎಂಬುದಾಗಲಿ
ಜಾತಿ ಭೇದ ಬೇಡ ನಮಗೆ ನಾವೆಲ್ಲರೂ ಒಂದಾಗಲಿ
ಸಂಸ್ಕ್ರತಿ ಸಂಗಾತಿಯ ಜೊತೆಯೆಂದೂ ಮರೆಯದಿರಲಿ
ದೇಶಕ್ಕಾಗಿ ಮಡಿದ ಸೇವಕರಿಗೆ ಮನದಲ್ಲಿ ಗೌರವವಿರಲಿ
ಮಹಾತ್ಮರಿದ್ದರೆಂದು ಸ್ವಾತಂತ್ರ್ಯ ನಮ್ಮದಾಗಿದೆ ನೆನಪಿರಲಿ
ದೇಶ ಭಕ್ತಿ ಎಂದೆಂದಿಗೂ ಕುಂದದಿರಲಿ
ರಾಮರಾಜ್ಯದ ಕನಸು ನನಸಾಗಿಸುವ ಗುರಿಯಾಗಿರಲಿ
ನಮ್ಮ ಜನನಿ ಭಾರತಾಂಬೆಯು ಶಿಖರದ ಎತ್ತರಕೆ ಹಾರಲಿ
ಅವಳ ಕೀರ್ತಿ ಶಿಖರದ ಕಿರೀಟವಾಗಲಿ

ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಷಯಗಳು

ಮಂಗಳವಾರ, ಜನವರಿ 24, 2012

ಮರೆಯಲಾರೆ





ಮರೆಯಲಾರೆನು ಮರೆಯದನ್ನ
ಮರೆ ಮರೆ ಎಂದರೆ ಮರಣ ಹೊಂದೆನು
ಮನದಿ ಮೂಡಿದೆ ಮೌನವೇದನೆ
ಮರೆಯನೆಂದರೆ ಮರೆವೆನು
ಮನಸ್ಸಿನಾಳದಿ ಪ್ರೀತಿ ಪ್ರೇಮ
ಮನೆ ಕಟ್ಟಿದೆ ನಾ ಹೇಗೆ ಮುರಿಯೆನು
ಮಂಗಲದಿ ಮಾಂಗಲ್ಯವಾಗಿದೆ
ಮಾಂಗಲ್ಯವ ಹೇಗೆ ಮರೆಯೆನು
ಮರವಾಗಿ ಬೆಳೆದ ಬಂಧನಕೆ
ಮರಣದಂಡನೆ ನೀಡಲಾರೆನು
ಮರೆಯಲಾರದ ಮೌಲ್ಯವನ್ನು
ಮರೆಯೆಂದರೆ ನಾ ಮರೆಯಲಾರೆನು 

ಭಾನುವಾರ, ಜನವರಿ 22, 2012

ಹೈಸ್ಕೂಲ ಹುಡುಗನ ಲಾಲಿ ಹಾಡು




ಜೋ ಜೋ ಜೋ ಜೋ ಜೋ ಜೋ
ರಾತ್ರಿ ಹೊತ್ತ ಆಗೇತಿ
ಕಣ್ಣು ಮುಚ್ಚು ನನ್ನ ಮಗನ
ಕನಸಾಗ ಐಶ್ವರ್ಯ ಬರತಾಳ
ಕಣ್ಣು ಹೊಡೆದು ನಿನ್ನ ಮಲಗಸ್ತಾಳ
ಜೋ ಜೋ ಜೋ ಜೋ ಜೋ ಜೋ

ಸಚಿನ ತೆಂಡುಲ್ಕರ್
ಕ್ರಿಕೆಟ್ ಕಲಸ್ತಾನ
ಕ್ಯಾಪ್ಟನ್ ಧೋನಿ ಹೇರಸ್ಟೈಲ್
ಮಾಡೋದು ಹೇಳ್ತಾನ
ಪಿ.ಟಿ.ಉಷಾ ಓಡಿ ಪೆಟ್ರೋಲ
ಉಳಿಸೋದು ಹೇಳ್ತಾಳ
ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಶ್ರೀ ರಾಜಕುಮಾರರು
ಗಂಧದ ಗುಡಿ ತೋರಿಸ್ತಾರ
ಸಾಹಸಸಿಂಹ ಕರುನಾಡ
ಹೆಮ್ಮೆಯ ಹೊಗಳ್ತಾರ
ರೈತನ ಮಗಳೆಂದು ಪೂಜಾ ಗಾಂಧಿ
ಪೋಜು ನೀಡ್ತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಕುವೆಂಪು ಬೇಂದ್ರೆ
ಕವಿತೆಯ ಬರಿತಾರ
ಸಿ ಅಶ್ವಥ್ ಸೋನು
ರಾಗದಿ ಹಾಡವ ಹಾಡ್ತಾರ
ಉಮಾಶ್ರೀ ಹು ಹು ಅಂತಾ
ಬಿದ್ದ ಬಿದ್ದ ನಗಿಸ್ತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಸಲಮಾನ ಖಾನ ಬಂದು
ಎಕ್ಟಿಂಗ್ ಕಲಿಸ್ತಾನ
ಹೃತ್ವಿಕ್ ರೋಶನ ನಿನಗ
ಕುಣಿಯೋದ ತೋರಿಸ್ತಾನ
ಶೀಲಾ ಕಿ ಜವಾನಿ
ಕೈತ್ರಿನಾ ಮಾಡತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಸಿದ್ಧರಾಮಯ್ಯನು ಕೈ
ತೋರಿಸಿ ಕರಿತಾನ
ಕುಮಾರಸ್ವಾಮಿ ರಾಧಿಕಾ
ಜೊತೆ ಬರತಾನ
ಶೋಭಾ ಕರಂದ್ಲಾಜೆ ಯಡ್ಡಿ
ಗೆಳೆತನ ಹೊಗಳ್ತಾರ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಶ್ರೀ ಹೀರೆಮಗಳೂರು ಕಣ್ಣನ್
ಉದಯಾಲಿ ಹರಟೆ ಹೊಡಿತಾರ
ಗಂಗಾವತಿ ಪ್ರಾಣೇಶ
ಖಿಲ ಖಿಲನೆ ನಗಿಸ್ತಾನ
ಇಂದುಮತಿ ಹಾಡಿದರ
ಕೃಷ್ಣನ ನಂದಿನಿ ಕುಣಿತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ನಿವ್ಜ ರಿಪೋರ್ಟರ್ಸ
ಪ್ರಶ್ನೆಗಳ ಮಳೆ ಸುರಿಸ್ತಾರ
ಸ್ಟಾರ ಪ್ಲಸ್ ನವರು
ಹೆಂಗಸರಿಗೆ ಸೀರಿಯಲ್ ತೋರಿಸ್ತಾರ
ಎಫ್ ಟಿವಿ ನೋಡುವರು
ಜೊಲ್ಲವ ಸುರಿಸ್ತಾರ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ



ತಡ ಮಾಡಿ ಎದ್ದರ
ಶಾಲೆಗ(ಅ)ಪ್ಪ ಬಿಡಾಕ ಬರ್ತಾನ
ಮಿಸ್ಸ ಮಿಸ್ಸ ಅನ್ನುತ್ತ
ಕನಸಲಿ ಪಾಠ ಕೇಳ್ತಾನ
ಬೇಗ ಏಳು ಇಲ್ಲಂದ್ರ
ಹೊಡಿತೀನಿ ನನ್ನ ಮಗನ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ












ಶುಕ್ರವಾರ, ಜನವರಿ 20, 2012

ಆಸೆ



ಮತ್ತೊಮ್ಮೆ ನನ್ನ ನೆನಪುಗಳು
ನಿಜ ವಸ್ತುಗಳಾಗುವ ಆಸೆ 
ಚಿಕ್ಕವರಿದ್ದಾಗ ಆಡಿದ 
ಉಸುಕಿನಲಿ ಗೂಡು ಕಟ್ಟುವ ಆಸೆ 
ಬಣ್ಣ ಬಣ್ಣದ ಚಿಟ್ಟೆಯಾಗಿ 
ಫ್ರಾಕ್ಕು ತೊಟ್ಟು ಓಡುವ  ಆಸೆ 
ನನ್ನ ಗೆಳತಿ ಸವಿಯ 
ಗಲ್ಲವ ಚಿವುಟಿ ನಗುವ  ಆಸೆ 
ಊಟಕ್ಕೆಂದು ಕೈ ತೊಳೆದರೆ 
ಅಮ್ಮನ ಸೆರಗಿಗೆ ಒರೆಸುವ ಆಸೆ 
ಸಂಬಂಧಿಕರ ಮನೆಗೆ ಹೋದರೂ
ಅಪ್ಪನ ತೊಡೆ ಮೇಲೆ ಕೂಡುವ  ಆಸೆ 
ಕದ್ದು ಮುಚ್ಚಿ ನಾ ಮೊದಲೂ ಬಡಿದರೂ 
ಅಣ್ಣ ಬಡಿದನೆಂದು ಸುಮ್ಮನೆ ಅಳುವ ಆಸೆ 
ಕುಡಿಯದ ಹಾಲಿಗೆ ಬೈಯ್ಯುವರೆಂದು 
ಸುಮ್ಮನೆ ಕಣ್ಣ್ಮುಚ್ಚಿ ಮಲಗುವ ಆಸೆ 
ಗಿಡ್ಡಿ ಗಿಡ್ಡಿ ಅನ್ನುವರೆಂದು 
ಹಗ್ಗವ ಆಡಿ ಸೈಕಲ್ ತುಳಿದು ಉದ್ದಾಗುವ ಆಸೆ 
ಕನ್ನಡಿ ಮುಂದೆ ಸುಮ್ಮನೆ ನಕ್ಕು 
ಚೆಂದ ಇದ್ದೀಯಾ ಎಂದು ಹೊಗಳುವ ಆಸೆ 
ಎಲ್ಲರೂ ಹೇಳಿದ ಔಷದ ಬಳಸಿ 
ಪದೇ ಪದೇ ಕೂದಲನು ಜಗ್ಗಿ ನೋಡುವಾಸೆ 
ಕನಸಲಿ ಕಂದ ಅರಮನೆಯ 
ರಾಜಕುಮಾರಿ ನಾನೆಂದು ನೆನೆಸಿ ನಗುವ ಆಸೆ 
ಮುದುಡಿ ಮಲಗುವ ನನ್ನ ಚಟಕೆ 
ಅಮ್ಮನಿಂದ ಬಯಿಸಿಕೊಳ್ಳುವಾಸೆ
ಗೊರಕೆ ಹೊಡೆಯುವ ಅಪ್ಪನ ಹೊಟ್ಟೆಗೆ 
ಗಣಪತಿ ಗಣಪತಿ ಅನ್ನುವ ಆಸೆ 
ಬೈಯ್ಯುವ ಅಮ್ಮನಿಗೆ ಅಪ್ಪನಿಂದ ಹೆದರಿಸಿ 
ಜಾಣಳೆಂದು ಹೊಗಳಿಕೊಳ್ಳುವ ಆಸೆ 
ಗೆಳತಿಯರೊಡನೆ ಗುಳ್ಳವನ ತಂದು 
ಚಿಕಮಿರಿ ಚೆನ್ನಕ್ಕನ ಹಾಡಾಡುವ ಆಸೆ 
ಒಂದೋ ಎರಡೋ ನನ್ನ ಆಸೆ 
ಆಸೆಗಳನ್ನು ಬದಿಯಿಟ್ಟು ನೋಡಬೇಕಿದೆ 
ಜೀವನದಲಿ  ಕಳೆದು ಹೋದ ಕ್ಷಣಗಳ 
ಆಸೆ ಮನಕೆ ಹುಟ್ಟುತ್ತಿದೆ..
ಬನ್ನಿ ಆಶಿಸೋಣ ಎಲ್ಲರ ಆಸೆಗಳು 
ನಿರಾಶೆಯಾಗದಿರಲಿ 
ಅವರವರ ಆಶೆಗಳು ಅವರಿಗೆ ದೊರೆಯಲಿ ... 

ನಮ್ಮ ರೈತ



ಬಿಸಿಲೆನ್ನದೆ ಮಳೆಯೆನ್ನದೆ 
ಹಸಿವ ತಡೆದು ಬದುಕುವರು 
ಆಯಾಸವೆಂದು  ಬೆವರು ಸುರಿಸಿ
ಬೇಸಗಿಯಲಿ ಕಣ್ಣೀರು ಹರಿಸಿ 
ಊಳುವ ನೆಲ ಕಂಡಾಗ ಹಸಿರು 
ರೈತನ ದೇಹದಲಿ ಕೇಳಿತ್ತು ಉಸಿರು 
ಹರಕು ಬಟ್ಟೆ ಮುರುಕು ಮನೆ 
ಊಟದಲ್ಲಿ ಮೊಸರು ಕೆನೆ 
ಸಾಲ ಒಂದೆ ಇವರ ಚಿಂತೆ 
ಆದ್ರೂ ಮಲಗು ಪರಿ ನೋಡಲಾಗದು ಅಂತೆ 
ದಣಿದು ದುಡಿದು ಗಳಿಸುವರು ಹಣ 
ಸುಖಿಯೆಂದರೆ ರೈತ ಜನರ ಮನ 
ಹೃದಯಾ ತುಂಬ ಪ್ರೀತಿಯ ಶ್ರೀಮಂತ 
ನಲಿಯುವರು ಬಂದರೆ ಋತು ವಸಂತ 
ಹಾಸಿಗೆಯಷ್ಟು ಕಾಲು ಚಾಚು 
ಇಲ್ಲಾದರೆ ಬೋಳು ತಲೆ ಬಾಚು 
ಜಾಣರಿವರು ಪ್ರಾಣಿ ಸ್ನೇಹಿಗಳು 
ಭಾರತದ ಹೆಮ್ಮೆಯ ಒಕ್ಕಲಿಗರು 


ಬಹುಶ:


ನೀರ್ಜಿವಿ ಆಗಬೇಕಿತ್ತು
ನಾನು ನೀರ್ಜಿವಿ

ಸಹನೆ ಶಾಂತಿ ತಿಳಿಯಬೇಕಿಲ್ಲ
ದ್ವೇಷದ ಕಿಚ್ಚಿಗೆ ಹೆದರಬೇಕಿಲ್ಲ
ಪ್ರೀತಿಯ ಜಾಲಕೆ ಸಿಲುಕಬೇಕಿಲ್ಲ
ಭಾವನೆಗಳ ಸಾಗರದಿ ಮುಳುಗಬೇಕಿಲ್ಲ..
ದು:ಖವೆಂದು ನೋದಬೇಕಿಲ್ಲ
ಸಂಬಂಧ ಸಂತೆಯಲಿ ಕಳೆಯಬೇಕಿಲ್ಲ
ಹಣ ಹಣವೆಂದು ಕೊರಗಬೇಕಿಲ್ಲ
ಅಹಂಕಾರದ ಜ್ವಾಲೆಯಲಿ ಉರಿಯಬೇಕಿಲ್ಲ..
ಮನಸ್ಸನು ಬೆಣ್ಣೆಯಾಗಿಸಿ ಕರಗಬೇಕಿಲ್ಲ
ಚಿಂತೆಯಲಿ ಚಿತೆಯಾಗಬೇಕಿಲ್ಲ
ಕಷ್ಟ ಬಂದರೆ ಕಣ್ಣೀರು ಹಾಕಬೇಕಿಲ್ಲ
ಕೆಟ್ಟ ಕ್ಷಣ ನೆನಸಲು ತಲೆಬೇಕಿಲ್ಲ..
ಸ್ವಾರ್ಥಿ ಜಗತ್ತಿನಲಿ ತ್ಯಾಗಿಸಬೇಕಿಲ್ಲ
ಹಡೆದವ್ವಗೆ ನೋವಿಸಿ ಹುಟ್ಟಬೇಕಿಲ್ಲ
ಾಯುಷ್ಯ ಮುಗಿಯಿತೆಂದು ಸಾಯಬೇಕಿಲ್ಲ
ಸತ್ತವರ ನೆನೆಯುತ ಮರೆಯಬೇಕಿಲ್ಲ

ನೀರ್ಜಿವಿ ಆಗಬೇಕಿತ್ತು
ನಾನು ನೀರ್ಜಿವಿ


ಮೌನವೇದನೆ


ಮನಸ್ಸೆ ಓ ಮನಸ್ಸೆ
ನಿನ್ನಲ್ಲೇಕೆ ಮೌನ ??
ಮಾತನಾಡು ನೀನು 
ಮುದ್ದಾಡಿ ಮಲ್ಲಿಗೆಯಾಗು
ಮುದುಡದಿರು ಮನಸ್ಸೆ
ಮಧುವನದ ಹೂ ಆಗಿರು
ಮೌನ ಒಪ್ಪದು
ಮನಸ್ಸು ಹಗುರಾಗದು
ನೀ ನಕ್ಕಾಗ ತಾನೆ
ಭೂಮಿ ಸುಂದರ ಕಾಣುವುದು
ಮೌನ ಬಿಡು ಮಾತನಾಡು
ವೇದನೆ ಮರೆತುಬಿಡು
ಮೌನದ ಮೋಡವಾಗದಿರು 
ಸಂತಸದ ಬೆಳಕಾಗು
ಮನಸ್ಸೆ ಓ ಮನಸ್ಸೆ
ನಿನ್ನಲ್ಲೇಕೆ ಮೌನ ?
ಮೌನವೇದನೆ ಕಿತ್ತೆಸೆದು 
ನನ್ನ ಅರಗಿಣಿಯಾಗಿರು