ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶುಕ್ರವಾರ, ಮೇ 25, 2012

ಭಾವ.

ಕಾಯುವ ಮನಕೆ 
ಕತ್ತಲೆಯ ಪಾಡು 
ಬಯಕೆಯ ಮನಕೆ 
ಬೆಳಗುವ ಹಾಡು 
ಕತ್ತಲೆಯ ಪಾಡಿಗೆ 
ಬೆಳಗುವ ಹಾಡಿಗೆ 
ಮನದ ಮನೆಯಲ್ಲಿರಬೇಕು 
ದೀಪದ ನಾಡು

ಬಯಕೆ

ಬೆಳೆ ಇಲ್ಲದೆ ಬರುಡಾಗಿದೆ
ಮಳೆ ಇಲ್ಲದೆ ಮರುಳಾಗಿದೆ 
ಬೆಳೆ ಮಳೆ ಬಂದರೆ ಅಲ್ಲವೇ 
ಕಳೆ ಬರುವುದು ಜನನಿಯ ಮೊಗಕೆ 
ನಗುವೆಲ್ಲಿ ! ಖುಷಿಯೆಲ್ಲಿ 
ಮೌನ ತುಂಬಿದೆ ಎದೆಯಡಿಯಲಿ 
ಬಯಸಿ ಬೆಂದಿದೆ 
ಕನಸು ಕಂಡು ನೊಂದಿದೆ 
ನನಸಾಗುವ ಛಲವೆಲ್ಲಿ 
ಬಂಜೆಯ ನೋವಿದೆ ಹೃದಯಾಳದಲಿ 
ಕೊರಗುತಿಹ ಮನದಲ್ಲಿ 
ಒಂದ ಹನಿ ತಗಲಿ ಬೀಜ ಮೊಳಕೆಯಾಗಿದೆ 
ಬೆಳೆಯುವ ಆನಂದಕೆ 
ಪನ್ನೀರು ಸುರಿದ ಬಂದು 
ಮೊಗ ತುಂಬ ಉಲ್ಲಾಸ , ನಗು ನೀಡಿದೆ

ಅಳುವ ಮನಸ್ಸು

ಕಂದಮ್ಮನ ಬೆಳೆಸುತ್ತಿರುವ 
ಅಮ್ಮನ ಗರ್ಭಕೋಶದಲಿ 
ನಲಿದಾಡುತಿದೆ ಕೂಸು ಜಗವ ಕಾಣುವ 
ಬಯಕೆಯಲಿ 
ಕನಸಿನ ಗೋಪುರ ರಚಿಸಿದೆ 
ಅಮ್ಮನ ಹೃದಯದಲಿ 
ಹಾಗೆನ್ನುವೆ ಹೀಗೆನ್ನುವೆ 
ಸಂತಸದ ಗಳಿಗೆಯ ಕಾಯುವೆ 
ಕಂದಮ್ಮನ ಆಡಿಸುವ 
ಲಾಲಿ ಹಾಡು ಕೇಳಿಸುವ 
ಆಸೆಗಳ ದೀಪ ಬೆಳಗುತಿದೆ 
ಬಯಸದೆ ಇದ್ದರೂ ಬಯಸಿ ಬಂದಿದ್ದರೂ 
ದೇವರ ದಯೆ ಇಲ್ಲದೇ ಅಮ್ಮನ ಮಾಯೆ ಕಾಣದೆ 
ಕಲ್ಲ ಮನದ ಮಾನವರು 
ಕಿತ್ತೆಸೆದಿರುವರು ಹೆಣ್ಣು ಕಂದಮ್ಮನನು 
ಪಾಪ ಆ ಕೂಸಿನದಲ್ಲ 
ಪಾಪಿಗಳು ಹೆಣ್ಣು ತೊರೆದವರು 
ಜಗವ ಬೆಳಗಲು ಬರುವ ಜೀವಕೆ 
ಕೊಳ್ಳೆ ಇಟ್ಟು ಕತ್ತಲು ನೀಡಿದವರು 
ಅಮ್ಮನ ಕರುಳಿಗೆ ಸುತ್ತಿದ ಜೀವವ 
ಕೈಯ್ಯಾರೆ ಕೊಂದು ಹೆಣ ಮಾಡಿದವರು 
ಎದೆಹಾಲು ಉಣಿಸುವ ಆ ತಾಯಿಗೆ 
ಕಂಣ್ಣೀರಿನ ಹೊಳೆಯಲ್ಲಿ ಮುಳುಗಿಸಿದವರು 
ತುತ್ತು ಮುತ್ತು ನೀಡುವ ಮಮತೆಗೆ 
ಮಣ್ಣಿನಲ್ಲಿ ಹಾಕದೆ ಜೀವಂತ ಶವ ಮಾಡಿದರು 

ಜನುಮದಾತರು

ಅಳುತ ಬರುವೆ ನಾನು 
ನಕ್ಕು ನಲಿದಿರಿ ನೀವು 
ಬೆತ್ತಲೆ ಇದ್ದ ನನಗೆ 
ಬಣ್ಣದ ಬಟ್ಟೆ ನೀಡಿದರಿ ನೀವು 
ನಕ್ಕರೆ ನಾನು 
ನಗುವಿರಿ ನೀವು 
ಅತ್ತರೆ ನಾನು ಅಳುವಿರಿ ನೀವು 
ಮುಟ್ಟಿದರೆ ನಾನು 
ಮುದ್ದಾಡುವಿರಿ ನೀವು 
ಹಾಸಿಗೆ ಒದ್ದೆಯಾದರೆ 
ಬೈಯ್ಯದೆ ಬದಲಿಸುವಿರಿ ನೀವು 
ನಿದ್ದೆಯಲೂ ಕಾಡಿದರೂ 
ಲಾಲಿ ಹಾಡುವಿರಿ ನೀವು 
ಹಸಿವ ಎನ್ನುವ ಮೊದಲೆ 
ಹೊಟ್ಟೆ ತುಂಬಿಸುವಿರಿ ನೀವು 
ಅಜ್ಞಾನಿಯಾದ ನನ್ನಲಿ 
ಜ್ಞಾನದ ದೀಪ ಬೆಳಗಿಸಿದಿರ ನೀವು 
ಬದುಕಿನ ಜಟಕಾಬಂಡಿಯಲಿ 
ನಿಮ್ಮ ಬದುಕನ್ನೆ ಬದಿಗಿಟ್ಟಿರಿ ನೀವು 
ನನ್ನ ಬಾಳ ನಂದಾದೀಪವಾಗಲು 
ತ್ಯಾಗಿಸಿರುವಿರಿ ಬಾಳನು ನೀವು 
ನಾನು ನಿಮ್ಮವನು 
ಪ್ರೀತಿಯ ಪಾತ್ರರಿರುವೆನು 
ನೀವು ನಮ್ಮವರು 
ಬದುಕ ನೀಡಿದ ಜನುಮದಾತರು

ಕನ್ನಡದ ದೀಪ ಬೆಳಗಲಿ



JPÀÌqÀ J£ÀßqÀªÁVzÉ
£À«Ää PÀ£ÀßqÀ
PÀ£ÀßqÀzÀ PÀ£ÀßrAiÀiÁUÀ°
PÀgÀÄ£ÁqÀ PÀ£ÀßqÀ

G¹gÀ G¹gÀ°
ºÀ¹gÁUÀ° PÀ£ÀßqÀ
JzÉ §rvÀªÀÅ
ºÉüÀ° PÀ£ÀßqÀ

D°¸ÀĪÀ ªÀÄ£ÀPÉ
PÉüÀ° EA¥ÁzÀ PÀ£ÀßqÀ
PÀtÂÚ£À eÉÆvÉAiÀiÁV
PÀuÁÚUÀ° PÀ£ÀßqÀ

gÀPÀÛªÁV ºÀjAiÀÄ°
zÉúÀzÀ° PÀ£ÀßqÀ
ºÀÈzÀAiÀÄ vÀÄA©gÀ°
¦æÃw¬ÄAzÀ PÀ£ÀßqÀ

ºÀÄnÖzÀ PÀƸÀÄ
£ÀÄrAiÀÄ° PÀ£ÀßqÀ
PÀÄtÂAiÀÄĪÀ £À«¯ÁV
PÀÄtÂzÁr¸ÀĪÀ PÀ£ÀßqÀ

PÀ°¬Äj PÀ°¹j
eÁÕ£À¢Ã¥À PÀ£ÀßqÀ
ªÀÄ£ÀzÀ° ªÀÄ£ÉAiÀÄ°
¨É¼ÀUÀ° PÀ£ÀßqÀ

£ÀÄr PÀ£ÀßqÀ £ÀqÉ PÀ£ÀßqÀ
vÀ£ÀÄ PÀ£ÀßqÀ ªÀÄ£À PÀ£ÀßqÀ
PÀ°AiÀÄĪÁ PÀ£ÀßqÀ £À°AiÀÄĪÁ PÀ£ÀßqÀ
ªÀÄgɸÀĪÁ £ÁªÉ®ègÀÆ JPÀÌqÀ J£ÀßqÀ
§AiÀĹj ¨É¼É¹j
PÀgÀÄ£ÁqÀ PÀ£ÀßqÀ
ºÀ¹ªÁUÀ° ºÀ¹gÁUÀ°
PÀgÀÄ£ÁqÀ PÀ£ÀßqÀ
zÉúÀªÁUÀ° fêÀªÁUÀ°
PÀgÀÄ£ÁqÀ PÀ£ÀßqÀ
§gÉAiÀÄĪÀ ±À§Ý PÉüÀĪÀ £ÁzÀ
ºÁPÀĪÀ vÁ¼À ¸À«AiÀÄĪÀ ¸ÁézÀ
MAzÉà PÀ£À¸ÀÄ PÀ£ÀßqÀªÁUÀ° £À£Àß PÀ£ÀßqÀ
£À£À¸ÁUÀ° ¸ÀzÁ ¨É¼ÀUÀĪÀ £ÀAzÁ¢Ã¥ÀzÀ PÀ£ÀßqÀ

ಬುಧವಾರ, ಮೇ 9, 2012

ಉಳಿಸಿರಿ ಹೆಣ್ಣು ಕಂದಮ್ಮನ ಜೀವ




ಹೆಣ್ಣು ಹೆಣ್ಣೆಂದರೆ
ಕೊರಗುವಿರೇಕೆ ನೀವಿಂದು
ಈ ಹೆಣ್ಣೆ ಅಲ್ಲವೇ?
ನಿಮಗೆ ಜನ್ಮ ನೀಡಿದವಳು
ಮರೆಯದಿರಿ ನೀವು
ಭೂಮಿ ತಾಯಿಯ ಹೆಣ್ಣೆಂದು
ಮಮತೆಯ ಮಡಿಲಲಿ
ಸಾಕುತಿರುವಳು ಜಗದ ಜೀವಿಗಳನು
ಕ್ರೋಧಿಯಾದರೆ ಅವಳು
ಕೊಲೆಗಾರನನ್ನೆ ಕೊಲ್ಲಬಲ್ಲಳು
ಪೂಜಿಸುವ ತಾಯಿ
ಭಾರತಾಂಬೆಯು ಕೂಡ ಹೆಣ್ಣು
ಮರೆಯದಿರಿ ಕಟುಕರೆ
ಹೆಣ್ಣು ಹೊಣ್ಣೆಂದು

ಹೆಣ್ಣು ಹೆಣ್ಣೆಂದರೆ
ಕೊರಗುವಿರೇಕೆ ನೀವಿಂದು ?
ಕ್ಷಮಯಾ ಧರಿತ್ರಿ
ಹೆಣ್ಣೆಂಬ ಹೆಣ್ಣು
ದು:ಖದಿ ಕ್ಷಣದಿ
ಮರೆಸುವಳು ನೋವನ್ನು
ನಗಿಸುವಳು ನಿಮ್ಮನ್ನು
ಈ ಕಲಾಕಾರ ಹೆಣ್ಣು
ತನ್ನ ಹಸಿವು ಕಾಣದೆ
ಹಸಿದ ಜೀವಕೆ ಅನ್ನ ನೀಡುವಳು ಹೆಣ್ಣು
ಪರರ ಸುಖಕೆ ತನ್ನ ಸುಖವ
ತ್ಯಾಗಿಸುವಳು ಹೆಣ್ಣು
ಕಣ್ಣೀರಿನ ಕಥೆಯ
ಸೆರಗಿನಲಿ ಕಟ್ಟಿ ಹಾಕುವಳು ಹೆಣ್ಣು

ದಾನಗಳಲ್ಲಿ ಶ್ರೇಷ್ಠವು ಒಂದು
ನೀಡಿರಿ ಜೀವದಾನ ಹೆಣ್ಣಿಗಿಂದು
ಹೆಣ್ಣೆಂದರೆ ಜೀವಿ ಹೆಣ್ಣು
ಉಳಿಸಿರಿ ಆಕೆಯ ಪ್ರಾಣವನ್ನು
ನೀಡಿರಿ ಜೀವದಾನ ಹೆಣ್ಣಿಗಿಂದು
ಕೊಲ್ಲದಿರಿ ಹೊಣ್ಣೆಂಬ ಹೆಣ್ಣನ್ನು
ಮಾಡದಿರಿ ಭ್ರೂಣ ಹತ್ಯೆಯನ್ನು
ಕತ್ತರಿಸದಿರಿ ಮಮತೆಯ ಬಳ್ಳಿಯನ್ನು
ಕೊಲ್ಲದಿರಿ ಹೊಣ್ಣೆಂಬ ಹೆಣ್ಣನ್ನು
ಆರಿಸದಿರಿ ಬೆಳಗುವ ದೀಪವನ್ನು
ಹಸಿಗೂಸಿನ  ಕೂಗು ಕೇಳುತ್ತಿಲ್ಲವೇ ನಿಮಗೆ
ಕೊಲ್ಲುತ್ತಿರುವಿರಿ ಹೆಣ್ಣನ್ನು
ಕತ್ತರಿಸಿರುವಿರಿ ಬಳ್ಳಿಯನ್ನು
ಮಾಡುತ್ತಿರುವಿರಿ ಭ್ರೂಣ ಹತ್ಯೆಯನ್ನು
ಬೆಳಗುವ ಮೊದಲೆ ಆರಿಸುತ್ತಿರುವಿರಿ
ಮನೆ ಮನೆಗಳ ಮನ ಮನಗಳ
ಹೆಣ್ಣೆಂಬ ನಂದಾದೀಪವನ್ನು
ಕತ್ತಲು ಹರಡುತಿದೆ ! ಮಾನವ ..
ಇನ್ನಾದರೂ ಬೆಳಗು ನೀ ಹೆಣ್ಣೆಂಬ ಬೆಳಕನ್ನು
ಮರೆತುಬಿಡು ಗಂಡು ಹೆಣ್ಣೆಂಬ
ಜಾತಿಭೇದವನ್ನು
ಶುರುವಾಗಲಿ ಹೃದಯದಿಂದ ಮನೆವರೆಗೆ
ಮನೆಯಿಂದ ಊರೊಳಗೆ
ಊರಿನಿಂದ ನಗರದೊಳಗೆ
ನಗರದಿಂದ ರಾಜ್ಯದೊಳಗೆ
ರಾಜ್ಯದಿಂದ ದೇಶದೊಳಗೆ
ದೇಶದಿಂದ ಇಡೀ ಪ್ರಪಂಚದೊಳಗೆ
ಶುರುವಾಗಲಿ ಸ್ತ್ರೀ ಲಿಂಗ ಭ್ರೂಣಹತ್ಯೆ ಅಳಿಸುವ ಹೋರಾಟ

ನೀಡಿರಿ ಮಹತ್ವ ಹೆಣ್ಣಿಗೆ
ಜನ್ಮ ನೀಡಿರಿ ಹೆಣ್ಣೆಂಬ ಮುಗ್ಧ ಜೀವಕೆ ..

ಶನಿವಾರ, ಮೇ 5, 2012

ಬರದ ಜ್ವರ ಬಿಡಿಸು ಬಾ ಮಳೆರಾಯ



ಬೇಸಿಗೆಯ ದಿನಗಳಿವು 
ಬರಗಾಲದ ಕ್ಷಣಗಳಿವು
ಮಳೆ ಬೆಳೆ ಇಲ್ಲದೆ ಬತ್ತಿದೆ ನೆಲವು 
ಸೂರ್ಯನ ತಾಪಕೆ ಕರಗಿವೆ ಹೊಳೆ ಕೆರೆಯು
ಕುಡಿಯಲು ನೀರಿಲ್ಲ, ಬೆಳೆಯಲು ಮಳೆಯಿಲ್ಲ 
ಬೆಳೆ ಇಲ್ಲದೆ ಧನ ಧಾನ್ಯಗಳಿಲ್ಲ
ಹಸಿದ ಹೊಟ್ಟೆಯಲಿ ಹಳಸಿದೆ ಅನ್ನವೆಲ್ಲ 
ಕೊಳೆ ಬಟ್ಟೆ ತೊಳೆಯಲು ಜಲವೇ ಇಲ್ಲ
ಶಾಂತ ಸಹನೆ ಜನರಿಗಿಲ್ಲ , ಸ್ವಾರ್ಥ ತುಂಬಿದೆಯಲ್ಲ 
ಶ್ರಮಿಸುತಿದೆ ಕಾರ್ಯ ನಿರ್ವಹಿಸುತಿದೆ ಸರಕಾರ 
ನೀರು ತಯಾರಿಸಲು ರಾಜಕಾರಣಿಗಳಲ್ಲ ಜಾದೂಗಾರ 
ಎಲ್ಲರ ಮಿತ ಬಳಕೆಯೆ ಸಮಸ್ಯೆಗಿರುವ ಪರಿಹಾರ 
ಹೊಳೆ ರಚಿಸಬೇಕು ನಿಸರ್ಗವೆಂಬ ಕಲೆಗಾರ
ಬಾಯಾರಿಸಿದ ಗದ್ದೆಗಳು 
ಒಣಗಿವೆ ಎಮ್ಮೆ- ಎತ್ತುಗಳು
ಕಂಗಾಲಾದ ಬಡವರ ಹೃದಯಗಳು 
ಗ್ರಾಮೀಣ ಜನತೆಯ ಹಾಹಾಕಾರ 
ಪ್ರತಿಭಟನೆಗೆ ವಿರೋಧ ಪಕ್ಷ ಸಲಹೆಗಾರ
ಸರಕಾರ  ತೊಟ್ಟಿರುವುದು ಸಮಸ್ಯೆಯ ಹಾರ 
ಭೂತಾಯಿಯ ಕರುಣೆಯಡಿ ಬರಲಿ ಸಂತೈಸಲು ಮಳೆಗಾರ