ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಮಂಗಳವಾರ, ನವೆಂಬರ್ 23, 2010

ಮನಸಿನ ದುಃಖ ..

ಮನಸ್ಸಿನ ಶಾಂತಿಗೆ ನೆಲೆ ಇಲ್ಲದೆ
ಅಶಾಂತಿಯಾದ ಮನ 
ಹುಚ್ಚು ಹಿಡಿದ ನಾಯಿಯ ಹಾಗೇ ಪರದಾಡುತಿದೆ
ಮನಸಿನ ನೋವಿಗೆ ತಾಳ್ಮೆ ಇಲ್ಲದೆ
ಕಣ್ಣೀರಿನಿಂದ ಮನಕೆ
ಪ್ರವಾಹ ಬಂದ ಜನರ ಪರಿಸ್ಥಿತಿ ಉಂಟಾಗುತಿದೆ
ಮನಸಿನ ದುಃಖಕೆ ಸೋಲು ಇಲ್ಲದೆ
ಸಂಕಟದಿಂದ ಮನ 
ಅನಾಥರಾದ ಮಕ್ಕಳ ಹಾಗೆ ಒಂಟಿಯಾಗಿದೆ
ಮನಸಿನ ಅಶಾಂತಿಯೆ ದುಃಖಕೆ ಕಾರಣ
ಎಂದು ನನ್ನ ಮನ ಕೂಗಿ ಹೇಳುತಿದೆ
ಅಶಾಂತಿಯೆ ನೋವಿನ ಕಣ್ಣೀರಿಗೆ ಕಾರಣ
ಎಂದು ಈ ಮನ ದುಃಖ ಹೇಳುತಿದೆ

ಓಂ..

ಓಂ ಅಕ್ಕ್ಷರವೇ ಓಂಕಾರದ ಧ್ವನಿ ಕೇಳಿದೆ
ಓಂ ಎಂದರೆ ಮನ ಶಾಂತಿಯೇ ಹೇಳಿದೆ
ಆತ್ಮವನ್ನು ಗುರುತಿಸಿದವನೇ ದೇವರೆಂದು ಹೇಳಿದೆ
ದೇವರನ್ನು ನಂಬಿದವನೆ ಭಕ್ತನೆಂದು ತಿಳಿದಿದೆ
ಶೃಧ್ಧೆ ಭಕ್ತಿ ತೋರಿದವನು 
ಅಹಿಂಸೆ ಶಕ್ತಿ ಹೊಂದವನು 
ತ್ಯಾಗ ಪ್ರೇಮ ಇದ್ದವನು 
ದೇವರನ್ನು ಪ್ರೀತಿಸುವವನು
ಆಸ್ತಿಕನೆಂದು ಹೇಳಿದೆ..
ಹಿಂಸೆ ದಾರಿಯಲ್ಲಿ ನಡೆದು 
ಅಪಾರ ದ್ವೇಷ ಹೊಂದಿದವನು 
ಅಧರ್ಮವನ್ನು ತಿಳಿದವನು
ನಾಸ್ತಿಕನೆಂದು ಹೇಳಿದೆ..
ಓಂಕಾರವ ಜಪಿಸುತ್ತ ಓಂ ಎಂದು ಹೇಳುತ್ತ 
ಓ ನಿನ್ನ ಮನಕೆ ಶಾಂತಿಯನ್ನು ನೀಡುತ್ತ
ಧರ್ಮವನ್ನು ಅರಿತು ಧರ್ಮವನ್ನು ಬೆಳೆಸಿ
ಧಾರ್ಮಿಕನಾಗಿರುವವನೆ ನಿಜ ದೇವರೆಂದು ಹೇಳಿದೆ..

ಆಸೆ ಎಂಬುದು ಸ್ವಾರ್ಥ..


  ಮನುಷ್ಯನ ಸ್ವಾರ್ಥ ಬಹಳ ಕೆಟ್ಟದು. ತನ್ನ ಸ್ವಾರ್ಥಕ್ಕಾಗಿ ಬೇರೆಯವರ ಮನಸ್ಸು ನೋವಿಸುತ್ತಾನೆ. ಸ್ವಾರ್ಥ ಎಂಬಲ್ಲಿ ತನ್ನ 
ಮನದ ಆಸೆ ಎಂದರ್ಥ. ಆಸೆ ಎಂಬುದು ಮನಸ್ಸಿನ ಹುಚ್ಚು ಮತ್ತು ಸ್ವಲ್ಪಸಮಯದ ಸಂತೋಷ ಕೊಡುವ ಸಮಯ.ರಾವಣನು
ಸೀತೆಯ ಆಸೆಯಿಂದ ಜಗಕ್ಕೆಲ್ಲ ಕೆಟ್ಟವನಾದ.ಹೀಗೆ ಹಲವಾರು ಜನ ಆಸೆ ಎಂಬ ಸ್ವಾರ್ಥದಲ್ಲಿ ಜೀವನವನ್ನು ಬಲಿ ಕೊಡುತ್ತಾರೆ.
ಯಾವ ಮನುಷ್ಯ ನಿಜವಾಗಿಯೂ ತನ್ನ ಆತ್ಮವನ್ನು ಪ್ರೀತಿಸುತ್ತಾನೆ. ಅದರ ಸಾಮರಸ್ಯವನ್ನು ತಿಳಿದುಕೊಳುತ್ತಾನೆ.ಆ ಮನುಷ್ಯ 
ಯಾವುದೆ ತರಹದ ದುರಾಸೆಯನ್ನು ಇಟ್ಟುಕೊಳುವುದಿಲ್ಲ.ಆತ್ಮಕಲ್ಯಾಣದ ಆಸೆಯಿಂದ ಜೀವಿಸುವ ಜೀವ ಜಗತ್ತಿನಲ್ಲಿ ಹುಟ್ಟಿ 
ಸಾರ್ಥಕನಾಗುತ್ತಾನೆ. ಆಸೆ ಎಂಬುದು ಮನದಲ್ಲಿಯೆ ಹುಟ್ಟಿ ಮನದ ಮೂಲೆಯಲ್ಲಿ ಅಂತ್ಯಗೊಳುವ ವಿಷಯ.
          ಯಾವುದೇ ಮನುಷ್ಯ ತನ್ನ ಸ್ವಾರ್ಥವೆಂದು ತಿಳಿದು ನಡೆದ ದಾರಿಯು ಬೇರೆಯವರಿಗೆ ಕೆಡಕನ್ನು ಉಂಟು
ಮಾಡಬಹುದು.ಅದಕ್ಕಾಗಿ ಬೇರೆಯವರ ಹಿತವೆ ತಮ್ಮ ಹಿತವೆಂದು ಭಾವಿಸುವ ಜೀವದ ಮನುಷ್ಯನಾಗಿರಬೇಕು. ಅವನು ಸ್ವಾರ್ಥಿ
ಎಂದು ಹೇಳುವಲ್ಲಿ ಮಹಾ ಪಾಪಿ ಎಂದು ಹೇಳುವಷ್ಟೇ ಅರ್ಥ ಅಡಗಿರುತ್ತದೆ. ಈ ಜಗತ್ತಿನಲ್ಲಿ ಸ್ವಾರ್ಥದ ದೀಪ ಎಲ್ಲರ್ ಮನೆಯಲ್ಲಿ
ಬೆಳಕು ನೀಡಿದೆ. ಮಾನವೀಯತೆಯೆಂಬ ತಂಪಾದ ಗಾಳಿಯಿಂದ ಸ್ವಾರ್ಥದ ದೀಪವನ್ನು ಆರಿಸಬಹುದು. ಪ್ರೀತಿ, ವಿಶ್ವಾಸ,
ಸಹನೆ, ಒಳೆಯತನ ಮತ್ತು ನಿರಹಂಕಾರ ಎಂಬ ಪಂಚಸೂತ್ರ ಬಳಿಸಿ ಆತ್ಮದ ದೀಪವನ್ನು ಉರಿಸಿದರೆ ಜೀವನವು
ಕಲ್ಯಾಣವಾಗುವುದು & ಬೇರೆಯವರ ಜೀವನದಲ್ಲಿಯೂ ಕೂಡ ನಿಮ್ಮ ದೀಪದ ಬೆಳಕಾಗುವುದು.
         ಮನುಷ್ಯ ಸ್ವಾರ್ಥವನ್ನು ಬಿಟ್ಟು ಎಲ್ಲರೂ ನಮ್ಮವರೆ.. ಅವರ ಒಳಿತು ನನ್ನದು ಅವರ ಕೆಡಿತು ನನ್ನದು ಎಂಬ
ಭಾವದಿಂದ ಬಾಳಬೇಕು. ತನ್ನ ಸ್ವಾರ್ಥದಿಂದ ಬೇರೆಯವರ ಮನಸು ನೋವಿಸುತ್ತಿದ್ದರೆ ಆ ಸ್ವಾರ್ಥದಲ್ಲಿರುವುದು ನನ್ನ ದುರಾಸೆ
ಎಂದು ತಿಳಿದುಕೊಳ್ಬೇಕು. ಈಗಿನ ಕಾಲದಲ್ಲಿ ಸ್ವಾರ್ಥವೆಂಬುದು ಮಗು ಹುಟ್ಟುವ ದಿನದಿಂದಲೆ ಕಲೆತು ಬಿಡುತ್ತದೆ. ಅದಕ್ಕೆ ಕಾರಣ
ಅದೇ ಸ್ವಾರ್ಥದಿಂದ ನೀಡಿರುವ ಮಗುವಿನ ಸಂಸ್ಕಾರಗಳು ಎಂದು ಮರೆಯದಿರಿ. ಮನುಷ್ಯನ ಮನಸ್ಸಿನ ಮೇಲೆ ಅವನ ಜೀವನ
ಆಧಾರಿತವಾಗಿರುತ್ತದೆ.ಹೀಗಾಗಿ ಸ್ವಾರ್ಥವನ್ನು ಅಳಿಸಿ ಪ್ರೀತಿಯಿಂದ ಬೆಳೆಸಿದ ಮನಸ್ಸಿನವರಾಗಿರಬೇಕು ಮತ್ತು ಬೇರೆಯವರ 
ಹಿತವನ್ನು ಬಯಸಬೇಕು. ಜೀವನದಲ್ಲಿ ಆಸೆ ಇರಬೇಕು ಆದರೆ ಅದು ಸ್ವಾರ್ಥವೆಂಬ ದುರಾಸೆಗೆ ಒಳಗಾಗಿರಬಾರದು. ಹೀಗೆ 
ತನ್ನ ಆತ್ಮ ಶುದ್ಧದಿಂದ ಆತ್ಮದ ಕಲ್ಯಾಣದಿಂದ ಜೀವನವನ್ನು ಒಳೆಯತನದಿಂದ ಪರಿಪೂರ್ಣಗೊಳಿಸಬೇಕು..

ಸೋಮವಾರ, ನವೆಂಬರ್ 8, 2010

ನನ್ನ ಮನಕೆ..

ಮನದಾಳದಿಂದ ಮನವೊಂದು ಹುಟ್ಟಿ




ಮುತ್ತಿಟ್ಟು ಬಂತು ನನ್ನ ಮನಕೆ



ಮನ ಮನ್ವೆಂದು ಜಪವ ಹಾಕುತ



ಮನಸಾರೆ ಪ್ರೀತಿಸು ನನ್ನ ಮನಕೆ



ಮನದಲ್ಲಿ ಇಣುಕಿ ನೀ ನೋಡಿದಾಗ



ಸವಿ ಸ್ನೇಹ ಕಾಣಿತು ನನ್ನ ಮನಕೆ



ಮನಸ್ಸೆಂಬ ಮನೆಯಲ್ಲಿ ನೀ ಬಂದು



ನೆಲೆದಾಗ ಮೌನ ತುಂಬಿತು ನನ್ನ ಮನಕೆ



ಮನದ ಮುಗಿಲಲಿ ನೀ ಹೊಳೆದಾಗ



ಸ್ವರ್ಗ ಕಾಣಿತು ನನ್ನ ಮನಕೆ



ಮನದಾಳದಿಂದ ಸ್ನೇಹ ನೀ ಬಯಸಿ



ಪ್ರೀತಿ ಮಾಡಿತು ನನ್ನ ಮನಕೆ..

ಸರಸ ..

ಮನದಾಳದಿಂದ ಮಹದಾಸೆಯೊಂದು








ಬೆನ್ನತ್ತಿ ಬಂದಿತು







ಕಗ್ಗತ್ತಲಲ್ಲಿ ಕಿರು ಬೆಳಕನ್ನು







ಹೆಕ್ಕಿ ಹುಡುಕಿತು







ಚಂದ್ರನ ಬೆಳಕಲ್ಲಿ ಮಂದದ







ಇರುಳಲಿ ಪ್ರೀತಿಯ ಕಾದಿತ್ತು







ಮಂದ ವಾಸನೆ ಮೆತ್ತು ಹಾಸಿಗೆ







ಇನಿಯನ ಕರೆದಿತು







ಸುಂದರ ಮೊಗವ ಸವಿಜೇನು ಹನಿಯ







ತಂಪು ತುಟಿಗಳು ಚುಂಬಿಸಿತು







ಕೆಂಪು ಕೆನ್ನೆಗೆ ಹೊಳೆವ ಕಣ್ಣಿಗೆ







ಮುತ್ತಿನ ಮಾಲೆ ಪೋಣಿಸಿತು







ಕಾಲ್ಗೆಜ್ಜೆ ನಾದವ ಕಾಲುಂಗುರ ಬೆರಳ







ಒಬ್ಬಟ್ಟಿನ ಹಾಗೆ ಸುತ್ತಾಡಿತು







ಕಾಣುವ ಸೊಂಟವ ಮೆಲ್ಲಗೆ ಕಚ್ಚಿ







ಮುತ್ತಿಟ್ಟು ಮಲ್ಲಿಗೆ ಮಳೆಯಾಯಿತು







ಉಸಿರು ಹಸಿರಾಗಿ ಮೌನ ಮಾತಾಗಿ







ತುಟಿಯ ಅಂಚು ಪ್ರೀತಿಯ







ಓಲೆ ಬರೆದಿತು...